ಬೆಂಗಳೂರಿನ ಮಾತೃಧಾಮ ಆಶ್ರಮದ ಮಕ್ಕಳೊಂದಿಗೆ ಶಾಂತಿಗೋಡು ಮಜಲು ಮಾ.ಲೋಚನ್‌ನ ಹುಟ್ಟುಹಬ್ಬ ಆಚರಣೆ

0

ಪುತ್ತೂರು : ಶಾಂತಿಗೋಡು ಗ್ರಾಮದ ಮಜಲು ನಿವಾಸಿ ಬೆಂಗಳೂರಿನಲ್ಲಿ ಸ್ವಂತ ಉದ್ಯೋಗ ನಡೆಸುತ್ತಿರುವ ಮಾಧವ ಗೌಡ ಮತ್ತು ಅಕ್ಷತಾ ದಂಪತಿಯ ಪುತ್ರ ಮಾ.ಲೋಚನ್‌ನ ಪ್ರಥಮ ವರ್ಷದ ಹುಟ್ಟುಹಬ್ಬವನ್ನು ಬೆಂಗಳೂರಿನ ಆನೆಕಲ್ ತಾಲೂಕಿನ ಮಾತೃಧಾಮ ಮಕ್ಕಳ ಆಶ್ರಮದಲ್ಲಿ ಆಚರಿಸಿದರು.

 

ಆಶ್ರಮದ ಮಕ್ಕಳೊಂದಿಗೆ ಕೇಕ್ ಕತ್ತರಿಸಿ ಹುಟ್ಟುಹಬ್ಬ ಆಚರಿಸಿದರು ಬಳಿಕ ಮಕ್ಕಳಿಗೆ ಒಂದು ಹೊತ್ತಿನ ಊಟ, ಸಿಹಿತಿಂಡಿ, ಪುಸ್ತಕ, ಪೆನ್ನುಗಳನ್ನು ನೀಡಿದರು. ಆಶ್ರಮದ ಮಾಲಕರು ಗಾಯತ್ರಿ ಗೋಪಿನಾಥ, ಮೇಲ್ವಿಚಾರಕ ಶಿವಪ್ಪ ಹಾಗೂ ಹೊಟೇಲ್ ಉದ್ಯಮಿ ರಂಜೀತ ರಾಜರಾಮ ಶೆಟ್ಟಿ ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here