ಪುತ್ತೂರು:ತೆರಿಗೆ ಸಲಹೆಗಾರ ರಾಜೇಶ್ ಕುಳದಪಾರೆಯವರ ಈಶಾ ಪ್ರೊಫೇಷನಲ್ ಟ್ಯಾಕ್ಸ್ ಕನ್ಸಲ್ಟೆನ್ಸಿ ಸರ್ವೀಸಸ್ ಅ.27ರಂದು ಈಶ್ವರಮಂಗಲದಲ್ಲಿ ಶುಭಾರಂಭಗೊಂಡಿತು.
ನೆಟ್ಟಣಿಗೆಮುಡ್ನೂರು ಗ್ರಾ.ಪಂ ಅಧ್ಯಕ್ಷ ರಮೇಶ್ ರೈ ಸಾಂತ್ಯರವರು ನೂತನ ಸಂಸ್ಥೆಯನ್ನು ಉದ್ಘಾಟಿಸಿ, ಶುಭಹಾರೈಸಿದರು. ಈಶ್ವರಮಂಗಲ ಪಂಚಲಿಂಗೇಶ್ವರ ವಿದ್ಯಾಸಂಸ್ಥೆಯ ಅಧ್ಯಕ್ಷ ಗೋಪಾಲಕೃಷ್ಣ ಕುಂಜತ್ತಾಯ, ಚಾರ್ಟರ್ಡ್ ಅಕೌಂಟೆಂಟ್ಗಳಾದ ಅನೀಶ್ ಪರಂಬೂರ್, ನಂದನ್ ರಾವ್ ಸುರತ್ಕಲ್, ರಂಜನ್ ಟಿ., ನಂದನ್ ಟಿ. ಹಾಗೂ ನಾರಾಯಣ ಮಣಿಯಾಣಿ, ರಾಜೇಶ್ರವರ ತಂದೆ ಕೊರಗಪ್ಪ ಮಣಿಯಾಣಿ, ತಾಯಿ ಶಾರದಾ ಸೇರಿದಂತೆ ಹಲವು ಮಂದಿ ಗಣ್ಯರು ಆಗಮಿಸಿ ಶುಭಹಾರೈಸಿದರು.
ಸಂಸ್ಥೆಯ ಮುಖ್ಯಸ್ಥ ರಾಜೇಶ್ರವರು ಸ್ವಾಗತಿಸಿ, ನಮ್ಮಲ್ಲಿ ಅಕೌಂಟಿಂಗ್ ಸರ್ವೀಸ್, ಬುಕ್ ಕೀಪಿಂಗ್ ಸರ್ವೀಸ್, ಜಿಎಸ್ಟಿ ರಿಜಿಸ್ಟ್ರೇಷನ್ & ಫೈಲಿಂಗ್, ಇನ್ಕಮ್ ಟ್ಯಾಕ್ಸ್ ಫೈಲಿಂಗ್, ಲೋನ್-ಪ್ರಾಜೆಕ್ಟ್ ರಿಪೋರ್ಟ್, ಎಸ್ಟಿಮೇಟೆಡ್ ಬ್ಯಾಲೆನ್ಸ್ ಶೀಟ್, ಟಿಡಿಎಸ್, ಇಎಸ್ಐ, ಇಪಿಎಫ್, & ಪಿಟಿ ರಿಟನ್ಸ್, ಟ್ರೇಡ್ ಲೈಸನ್ಸ್ ಮೊದಲಾದ ಸೇವೆಗಳನ್ನು ನೀಡಲಾಗುವುದು ಎಂದು ಹೇಳಿ ಸರ್ವರ ಸಹಕಾರ ಕೋರಿದರು.