ಗುಂಡ್ಯ ಸಮೀಪ ಜಾನುವಾರು ತಲೆ, ಕಾಲು ಪತ್ತೆ ಹಚ್ಚಿದ ಬಜರಂಗದಳ ಕಾರ್ಯಕರ್ತರು-ಪೊಲೀಸರಿಗೆ ಮಾಹಿತಿ

0

ಕಡಬ: ಗುಂಡ್ಯ ಸುಬ್ರಹ್ಮಣ್ಯ ರಸ್ತೆಯ ದೇರಣೆ ಸಮೀಪ ಕಾಡಿನಲ್ಲಿ ದನದ ತಲೆ, ಕಾಲು ಪತ್ತೆಯಾದ ಘಟನೆ ಡಿ.7ರಂದು ನಡೆದಿದೆ. ಶಿರಾಡಿ ಮತ್ತು ಸಿರಿಬಾಗಿಲು ಬಜರಂಗದಳ ಕಾರ್ಯಕರ್ತರು ಇದನ್ನು ಪತ್ತೆ ಹಚ್ಚಿ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.

ಇಂತಹ ಹೇಯ ಕೃತ್ಯವನ್ನು ಮಾಡಿದವರನ್ನು ಪತ್ತೆ ಹಚ್ಚಬೇಕು ಇಲ್ಲದಿದ್ದಲ್ಲಿ ತೀವ್ರ ಹೋರಾಟ ಮಾಡುವುದಾಗಿ ಕಡಬ ಪ್ರಖಂಡ ವಿ.ಹಿಂ.ಪ. ಅಧ್ಯಕ್ಷ ರಾಧಾಕೃಷ್ಣ ಕೋಲ್ಪೆ ಹಾಗೂ ಬಜರಂಗದಳ ಕಡಬ ಪ್ರಖಂಡ ಸಂಯೋಜಕ ಮನೋಜ್ ಖಂಡಿಗ ತಿಳಿಸಿದ್ದಾರೆ.

LEAVE A REPLY

Please enter your comment!
Please enter your name here