ಬಿಜೆಪಿ ವೃತ್ತಿಪರರ ಪ್ರಕೋಷ್ಠದ ಬೆಂಗಳೂರು ಉತ್ತರ ಜಿಲ್ಲಾ ಸಂಚಾಲಕರಾಗಿ ಹೇಮಂತ್ ರೈ ಮನವಳಿಕೆ

0

ಪುತ್ತೂರು: ಬಿಜೆಪಿ ವೃತ್ತಿಪರರ ಪ್ರಕೋಷ್ಠದ ಬೆಂಗಳೂರು ಉತ್ತರ ಜಿಲ್ಲಾ ಸಂಚಾಲಕರಾಗಿ ಕಡಬ ತಾಲೂಕಿನ ಆಲಂಕಾರಿನ ಹೇಮಂತ್ ರೈ ಮನವಳಿಕೆ ನೇಮಕಗೊಂಡಿದ್ದಾರೆ. ವೃತ್ತಿಪರ ಪ್ರಕೋಷ್ಠದ ರಾಜ್ಯ ಸಂಚಾಲಕ ಚೆನ್ನಮಲ್ಲಿಕಾರ್ಜುನ ಬಿ. ಪಾಟೀಲ್ ಹಾಗೂ ಸಹಸಂಚಾಲಕ ರವೀಂದ್ರ ಪೈ ಈ ಆದೇಶ ಹೊರಡಿಸಿದ್ದಾರೆ.


ವೃತ್ತಿಪರರ ಪ್ರಕೋಷ್ಠದ ಬೆಂಗಳೂರು ಉತ್ತರ ಜಿಲ್ಲೆಯ ಸಹ ಸಂಚಾಲಕರಾಗಿದ್ದ ಇವರು, ಇದೀಗ ಸಂಚಾಲಕರಾಗಿ ನೇಮಕಗೊಂಡಿದ್ದಾರೆ. ಎಂಬಿಎ, ಎಲ್‌ಎಲ್‌ಬಿ ಪದವೀಧರರಾಗಿರುವ ಇವರು, ಬೆಂಗಳೂರು, ತಮಿಳುನಾಡು, ಮಡಿಕೇರಿ, ಬಂಡೀಪುರ, ಚಾಮರಾಜನಗರಗಳಲ್ಲಿ ಪ್ರವಾಸೋದ್ಯಮ ಉದ್ಯಮಿಯಾಗಿ ಗುರುತಿಸಿಕೊಂಡಿದ್ದಾರೆ. ಇದಕ್ಕೂ ಮೊದಲು ಮಹೀಂದ್ರಾ, ಸ್ಟಲಿಂಗ್ ಹಾಲಿಡೇಸ್, ಲೀಸರ್ ವೆಕೇಶನ್ಸ್ ಕಂಪೆನಿಗಳಲ್ಲಿ ಕರ್ತವ್ಯ ನಿರ್ವಹಿಸಿದ್ದರು. ಹೇಮಂತ್ ರೈ ಅವರು ಕಡಬ ತಾಲೂಕಿನ ಆಲಂಕಾರಿನ ಮನವಳಿಕೆ ಗುತ್ತಿನವರಾಗಿದ್ದಾರೆ.

LEAVE A REPLY

Please enter your comment!
Please enter your name here