ಬೆಳ್ಳಿಪ್ಪಾಡಿ ಉಳ್ಳಾಕುಲು-ಧೂಮಾವತಿ-ಪರಿವಾರ ಶಕ್ತಿಗಳ ನೇಮೋತ್ಸವ

0

ಈಶ್ವರಮಂಗಲ: ಕುಂಬ್ಳೆ ಸೀಮೆಯ ದೇಲಂಪಾಡಿ ಗ್ರಾಮದ ಬೆಳ್ಳಿಪ್ಪಾಡಿ ನಡುಬೆಟ್ಟು ದೈವಸ್ಥಾನದಲ್ಲಿ ವರ್ಷಂಪ್ರತಿ ನಡೆದು ಬರುವಂತೆ ವೈಭವದ ನೇಮೋತ್ಸವ ಡಿ. 06 -07 ರಂದು ನಡೆಯಿತು. ಗ್ರಾಮದ ನಾಲ್ಕು ವರ್ಗ ಪ್ರಮುಖರು ಇದ್ದುಕೊಂಡು ಉಳ್ಳಾಕುಲು – ಧೂಮಾವತಿ ಪರಿವಾರ ಶಕ್ತಿಗಳಿಗೆ ನಡೆದ ನೇಮೋತ್ಸವವನ್ನು ಬೆಳ್ಳಿಪ್ಪಾಡಿ ರಾಮಕೃಷ್ಣ ಶಗ್ರಿತ್ತಾಯ, ಬೆಳ್ಳಿಪ್ಪಾಡಿ ಸದಾಶಿವ ರೈ, ಹಳೆಮನೆ ಜತ್ತಪ್ಪ ಗೌಡ, ಬೆಳ್ಳಿಪ್ಪಾಡಿ ಸದಾನಂದ ರೈ, ಬಾಳೆಕೋಡಿ ತೇಜಕುಮಾರ ನಿರೂಪಿಸಿದರು. ಬ್ರಹ್ಮಶ್ರೀ ಕುಂಟಾರು ವಾಸುದೇವ ತಂತ್ರಿಯವರ ನಿರ್ದೇಶನದಲ್ಲಿ ಧಾರ್ಮಿಕ ವಿಧಿ-ವಿಧಾನ ನಡೆಯಿತು. ಸಹಸ್ರಾರು ಮಂದಿ ಭಾಗವಹಿಸಿದ್ದರು. ನೆರೆದ ಭಕ್ತರಿಗೆ ಅನ್ನ ಸಂತರ್ಪಣೆ ನಡೆಯಿತು. 

LEAVE A REPLY

Please enter your comment!
Please enter your name here