ವೀರಮಂಗಲ ಶಾಲೆಯಲ್ಲಿ ಹಿರಿಯ ವಿದ್ಯಾರ್ಥಿಗಳ ಮತ್ತು ಪೋಷಕರ ಕ್ರೀಡಾಕೂಟ

0

ಪುತ್ತೂರು: ವೀರಮಂಗಲ ಶಾಲೆಯ ವಾರ್ಷಿಕೋತ್ಸವದ ಪ್ರಯುಕ್ತ ಶಾಲಾ ಕ್ರೀಡಾಂಗಣದಲ್ಲಿ ಹಿರಿಯ ವಿದ್ಯಾರ್ಥಿಗಳ ಕ್ರೀಡಾಕೂಟವು ನಡೆಯಿತು.

ಕಾರ್ಯಕ್ರಮವನ್ನು ನಿವೃತ್ತ ರೈಲ್ವೆ ಇಂಜಿನಿಯರ್ ಗೋಪ ಕುಮಾರ್ ಕಾರ್ಯಕ್ರಮ ಉದ್ಘಾಟಿಸಿ, ಮಾತನಾಡಿ ಶಾಲೆ ಎಂಬುದು ಜೀವನಕ್ಕೆ ಹಾದಿ ತೋರಿಸುವ ಒಂದು ತಾಣ ಇಲ್ಲಿ ವಿದ್ಯಾರ್ಥಿಗಳು ತಮ್ಮ ಕಲಿಕೆಯನ್ನು ವಿಸ್ತಾರಗೊಳಿಸುತ್ತಾರೆ ಅವರಿಗೆ ಅನುಕೂಲವಾಗುವಂತೆ ಬೌದ್ಧಿಕ ಸೌಲಭ್ಯಗಳನ್ನು ಪೋಷಕರು ನಾವು ಒದಗಿಸಬೇಕು ಶಾಲೆಗೆ ಅಗತ್ಯ ಇರುವ ಸ್ಮಾರ್ಟ್ ಕ್ಲಾಸ್ ರೂಂ ಗೆ ಟೈಲ್ಸ್ ಅಳವಡಿಕೆಗೆ ಧನಸಹಾಯ ನೀಡುವುದಾಗಿ ಘೋಷಿಸಿದರು.

ವೇದಿಕೆಯಲ್ಲಿ ಪದ್ಮನಾಭ ಗೌಡ ಗುತ್ತು , ಲಕ್ಷ್ಮಣಗೌಡ ಡೆಬ್ಬೆಲಿ, ಬಾಬು ಮುಗೇರ ಉಷಾ ಜಗನ್ನಾಥ್, ಹರ್ಷ ಗುತ್ತು, ಉಮೇಶ್ ಪೆಲತ್ತಡಿ, ವಸಂತ ವೀರಮಂಗಲ, ಮಹಾಬಲ ರೈ, ಗೋಪಾಲಕೃಷ್ಣ, ಅನುಪಮ ,ರಝಾಕ್ ಉಪಸ್ಥಿತರಿದ್ದರು . ಶಾಲಾಮುಖ್ಯಗುರು ತಾರಾನಾಥ ಸವಣೂರು ಸ್ವಾಗಸಿದರು, ಯೋಗೀಶ್ ಕಾರ್ಯಕ್ರಮ‌ ನಿರೂಪಿಸಿದರು. ಕೇಶವ ವಂದಿಸಿದರು

LEAVE A REPLY

Please enter your comment!
Please enter your name here