ಮಾನ್ವಿ ಆಚಾರ್ಯ ಕರ್ನಾಟಕ ಪ್ರತಿಭಾ ರತ್ನ ಪ್ರಶಸ್ತಿಗೆ ಆಯ್ಕೆ

0

ಪುತ್ತೂರು: ಅಖಿಲ ಕರ್ನಾಟಕ ಬೆಳದಿಂಗಳ ಸಾಹಿತ್ಯ ಸಮ್ಮೇಳನದಲ್ಲಿ ನೀಡುವ ಕರ್ನಾಟಕ ಪ್ರತಿಭಾ ರತ್ನ ಪ್ರಶಸ್ತಿಗೆ ಮಂಗಳೂರಿನ ಮಾನ್ವಿ ಆಚಾರ್ಯರವರು ಆಯ್ಕೆಯಾಗಿದ್ದಾರೆ. ಮೂಲ್ಕಿ ತಾಲೂಕಿನ ಶ್ರೀವಿಶ್ವನಾಥ ದೇವಾಲಯದಲ್ಲಿ ನಡೆಯುವ 13ನೇ ಅಖಿಲ ಕರ್ನಾಟಕ ಬೆಳದಿಂಗಳ ಸಾಹಿತ್ಯ ಸಮ್ಮೇಳನದಲ್ಲಿ ಪ್ರಶಸ್ತಿ ಪ್ರದಾನ ನಡೆಯಲಿದೆ.

ಮಂಗಳೂರಿನ ಕೃಷ್ಣ ಪ್ರಸಾದ್ ಆಚಾರ್ಯ ಮತ್ತು ಕಾವ್ಯ ಕೃಷ್ಣಪ್ರಸಾದ್ ಆಚಾರ್ಯರವರ ಪುತ್ರಿಯಾದ ಮಾನ್ವಿ ಆಚಾರ್ಯರವರು ಮಂಗಳೂರು ಡೊಂಗರಕೇರಿಯ ಕೆನರಾ ಶಾಲೆಯಲ್ಲಿ ಒಂದನೇ ತರಗತಿಯಲ್ಲಿ ವ್ಯಾಸಂಗ ಮಾಡುತ್ತಿದ್ದಾರೆ. ತನ್ನ ಮೂರನೇ ವಯಸ್ಸಿನಲ್ಲಿ ದೇವರ ನಾಮ, ಸಿನಿಮಾ ಹಾಡು, ನೃತ್ಯ, ಚಿತ್ರಕಲೆ, ಕಥೆ ಹೇಳುವುದು, ಛದ್ಮವೇಷ, ಏಕಪಾತ್ರಾಭಿನಯ ಇವುಗಳು ಆಸಕ್ತಿಯಾಗಿತ್ತು. ನಟ ಪುನೀತ್ ರಾಜ್ ಕುಮಾರ್ ಅವರ ಅಭಿಮಾನಿಯಾಗಿದ್ದು ತಂದೆಯೊಂದಿಗೆ ಅಪ್ಪು ಸರ್ ಸಿನಿಮಾ ಹಾಡುಗಳನ್ನು ಹಾಡುವುದೆಂದರೆ ಇವರಿಗೆ ಬಹಳ ಇಷ್ಟ. ನಾಲ್ಕನೇ ವಯಸ್ಸಿನಲ್ಲಿ ಸಂತ ಸಿಸಿಲಿಯ ಸಂಗೀತ ಶಾಲೆ ಕೊಪ್ಪ ಇವರು ನಡೆಸಿದ ಸಂಗೀತ ಸಮ್ಮಿಲನ ಸ್ಪರ್ಧೆಯಲ್ಲಿ ಪ್ರೋತ್ಸಾಹಕ ಸ್ಥಾನ ಪಡೆದಿದ್ದಾರೆ. ಸುದ್ದಿ ಪುತ್ತೂರು ಶ್ರೀಕೃಷ್ಣ ನೃತ್ಯದಲ್ಲಿ ಪ್ರಥಮ ಸ್ಥಾನ ಹಾಗೂ ಇಸ್ಕಾನ್ ಮಂಗಳೂರು ಇವರು ನಡೆಸಿದ ವಿವಿಧ ಸ್ಪರ್ಧೆಗಳಲ್ಲಿ ಪ್ರಥಮ, ದ್ವಿತೀಯ ಹಾಗೂ ತೃತೀಯ ಸ್ಥಾನವನ್ನು ಪಡೆದಿದ್ದಾರೆ. ಕಳೆದ ಒಂದು ವರ್ಷದಿಂದ ವಾಯ್ಸ ಆಫ್ ಆರಾಧನಾ ತಂಡದಲ್ಲಿ ಭಾಗವಹಿಸಿ ಜನಮೆಚ್ಚುಗೆಯ ಪ್ರಶಸ್ತಿಯನ್ನು ಪಡೆದಿದ್ದಾರೆ. ಸ್ಪಂದನ ಟಿ.ವಿ ಚಾನೆಲ್ ಮಂಗಳೂರು ಇವರ ರೈಸಿಂಗ್ ಸ್ಟಾರ್ ರಿಯಾಲಿಟಿ ಶೋ, ಸಾಯಿ ಈಶ್ವರ್ ಟಿ.ವಿ ಉಡುಪಿ, ಡೈಜಿವರ್ಲ್ಡ್ ಚಾನೆಲ್‌ನಲ್ಲಿ ಭಾಗವಹಿಸಿದ್ದಾರೆ.

LEAVE A REPLY

Please enter your comment!
Please enter your name here