ಏ.10 ಮುಡಿಪುನಡ್ಕ ಶ್ರೀ ಕೃಷ್ಣ ಭಜನಾ ಮಂದಿರದ 22 ನೇ ವಾರ್ಷಿಕೋತ್ಸವ- ಸಾರ್ವಜನಿಕ ಶ್ರೀ ಸತ್ಯನಾರಾಯಣ ಪೂಜೆ

0

ನಿಡ್ಪಳ್ಳಿ; ಶ್ರೀ ಕೃಷ್ಣ ಭಜನಾ ಮಂದಿರ ಮುಡಿಪುನಡ್ಕ ಇದರ 22 ನೇ ವರ್ಷದ ವಾರ್ಷಿಕೋತ್ಸವವು ಸಾರ್ವಜನಿಕ ಶ್ರೀ ಸತ್ಯನಾರಾಯಣ ಪೂಜೆ, ಭಜನೆ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳೊಂದಿಗೆ ಏ.10 ರಂದು ನಡೆಯಲಿದೆ.

    ಕಾರ್ಯಕ್ರಮಗಳು;

   ಬೆಳಿಗ್ಗೆ ಗಂಟೆ 8 ರಿಂದ ಗಣಪತಿ ಹವನ.ಗಂಟೆ 10 ರಿಂದ ಶ್ರೀ ಸತ್ಯನಾರಾಯಣ ಪೂಜೆ ಮಧ್ಯಾಹ್ನ ಗಂಟೆ 12.30 ಕ್ಕೆ ಮಹಾಪೂಜೆ, ಪ್ರಸಾದ ವಿತರಣೆ ನಂತರ ಸಾರ್ವಜನಿಕ ಅನ್ನಸಂತರ್ಪಣೆ. ನಡೆಯಲಿದೆ. ಅನ್ನದಾನದ ಸೇವಾ ಕರ್ತರು ದಿ.ರಾಮಯ್ಯ ಆಚಾರ್ಯ ಕುಡ್ಚಿಲ ಇವರ ಸ್ಮರಣಾರ್ಥ ದೇವಕಿ ಆಚಾರ್ಯ ಮತ್ತು ಮಕ್ಕಳು ಕುಡ್ಚಿಲ ತರವಾಡು ಇವರು.

      ಸಂಜೆ ಗಂಟೆ 6 ರಿಂದ ರಾತ್ರಿ 9 ರವರೆಗೆ ವಿವಿಧ ಭಜನಾ ಮಂಡಳಿಗಳಿಂದ ಭಜನಾ ಕಾರ್ಯಕ್ರಮ ನಡೆದು ಭಜನಾ ಮಂಗಳಾರತಿ.ರಾತ್ರಿ ಗಂಟೆ 9.30 ರಿಂದ ನಮ್ಮ ಕಲಾವಿದೆರ್ ಬೆದ್ರ ಇದರ ಕಲಾವಿದರಿಂದ ಹಾಸ್ಯಮಯ ತುಳು ನಾಟಕ “ಕುಸಲ್ದ ಗೊಬ್ಬು” ನಡೆಯಲಿದೆ ಎಂದು ಮಂಡಳಿ ಅಧ್ಯಕ್ಷ ಜಯಂತ ನಾಯ್ಕ ತಲೆಂಜಿ ಮತ್ತು ಸಮಿತಿ ಸದಸ್ಯರು ತಿಳಿಸಿದ್ದಾರೆ.

LEAVE A REPLY

Please enter your comment!
Please enter your name here