ನಿಡ್ಪಳ್ಳಿ ದೇವಸ್ಥಾನದಲ್ಲಿ 19 ನೇ ವರ್ಷದ ಸಾಮೂಹಿಕ ಶ್ರೀ ಸತ್ಯನಾರಾಯಣ ಪೂಜೆ

0

ನಿಡ್ಪಳ್ಳಿ; ಸಾಮೂಹಿಕ ಶ್ರೀ ಸತ್ಯನಾರಾಯಣ ಪೂಜಾ ಸಮಿತಿ ನಿಡ್ಪಳ್ಳಿ, ಶ್ರೀ ಶಾಂತದುರ್ಗಾ ದೇವಸ್ಥಾನ ಶ್ರೀ ಕ್ಷೇತ್ರ ನಿಡ್ಪಳ್ಳಿ ಇವುಗಳ ಸಂಯುಕ್ತ ಆಶ್ರಯದಲ್ಲಿ ಬ್ರಹ್ಮಶ್ರೀ ದಿನೇಶ್ ಮರಡಿತ್ತಾಯ ಗುಮ್ಮಟೆಗದ್ದೆ ಇವರ ನೇತೃತ್ವದಲ್ಲಿ ಏ.9 ರಂದು ನಿಡ್ಪಳ್ಳಿ ಶ್ರೀ ಶಾಂತದುರ್ಗಾ ದೇವಸ್ಥಾನದಲ್ಲಿ 19 ನೇ ವರ್ಷದ ಸಾಮೂಹಿಕ ಶ್ರೀ ಸತ್ಯನಾರಾಯಣ ಪೂಜೆ ನಡೆಯಿತು.

ಬೆಳಿಗ್ಗೆ  ಪೂಜೆ ಪ್ರಾರಂಭವಾಗಿ ಮಧ್ಯಾಹ್ನ ಮಹಾ ಮಂಗಳಾರತಿ ಪ್ರಸಾದ ವಿತರಣೆ ನಂತರ ಅನ್ನಸಂತರ್ಪಣೆ ನಡೆಯಿತು.ದೇವಸ್ಥಾನದ ಪ್ರಧಾನ ಅರ್ಚಕ ವೇದ ಮೂರ್ತಿ ನವೀನ್ ಹೆಬ್ಬಾರ್, ಪೂಜಾ ಸಮಿತಿ ಗೌರವಾಧ್ಯಕ್ಷ ರಾಧಾಕೃಷ್ಣ ಪಾಟಾಳಿ.ಬಿ,ಅಧ್ಯಕ್ಷ ಮಂಜುನಾಥ ರೈ ಮತ್ತು ಪತ್ನಿ ಲೀಲಾವತಿ.ಎಂ.ರೈ, ಕಾರ್ಯದರ್ಶಿ ದಿವ್ಯಾ ಚೆಲ್ಯರಮೂಲೆ, ಜತೆ ಕಾರ್ಯದರ್ಶಿ ಹೇಮಾವತಿ  ಚಂದುಕೂಡ್ಲು,ಕೋಶಾಧಿಕಾರಿ ಹರಿಪ್ರಸಾದ್ ಚೆಲ್ಯರಮೂಲೆ,ಸಲಹೆ ಗಾರರಾದ ಸೇವಾ ಪ್ರತಿನಿಧಿ ಜಗನ್ನಾಥ ಪಾಟಾಳಿ ಕೋನಡ್ಕ, ನವೀನ್ ಕುಮಾರ್ ಮುಂಡಕೊಚ್ಚಿ, ಯೋಜನೆಯ ಬೆಟ್ಟಂಪಾಡಿ ವಲಯ ಮೆಲ್ವೀಚಾರಕ ಶಿವಪ್ಪ.ಬಿ, ದೇವಸ್ಥಾನದ ಆಡಳಿತ ಮಂಡಳಿ ಅಧ್ಯಕ್ಷ ನಾರಾಯಣ ರೈ ಕೊಪ್ಪಳ, ಮಾಜಿ ಅಧ್ಯಕ್ಷ ನಾಗೇಶ ಗೌಡ ಪುಳಿತ್ತಡಿ ಹಾಗೂ ಆಡಳಿತ ಮಂಡಳಿ ಸದಸ್ಯರು ಮತ್ತು ಊರ ಪರವೂರ ಭಕ್ತಾದಿಗಳು ಪಾಲ್ಗೊಂಡರು. ಪೂಜಾ ಸಮಿತಿ ಸದಸ್ಯರಾದ ನವನೀತ. ಡೊಂಬಟೆಬರಿ,ಪ್ರೇಮಾ ಡೊಂಬಟೆಬರಿ, ಸಂಜೀವಿ,ಲಲಿತಾ ಗೋಳಿತ್ತಡಿ, ರಾಮಚಂದ್ರ ಮಣಿಯಾಣಿ ಗೋಳಿತ್ತಡಿ, ಕುಶಾಲಪ್ಪ ಕೋಡಿ,ಒಕ್ಕೂಟದ ಉಪಾಧ್ಯಕ್ಷ ಸತೀಶ್ ಮುಂಡಕೊಚ್ಚಿ, ಕಾರ್ಯದರ್ಶಿ ಶ್ರೀಮತಿ ಕೊಪ್ಪಳ, ಕೋಶಾಧಿಕಾರಿ ತಿಮ್ಮಪ್ಪ ಕುಕ್ಕುಪುಣಿ, ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ದಿ ಯೋಜನೆಯ ನಿಡ್ಪಳ್ಳಿ ಒಕ್ಕೂಟದ ಸದಸ್ಯರು ಸಹಕರಿಸಿದರು.

LEAVE A REPLY

Please enter your comment!
Please enter your name here