‘ಹಿಂದುತ್ವಕ್ಕಾಗಿ ಪ್ರಾಣ ನೀಡಿದ ಪ್ರವೀಣ್ ನೆಟ್ಟಾರ್‌ ನಮಗೆ ಆದರ್ಶ’; ದಿ.ಪ್ರವೀಣ್ ನೆಟ್ಟಾರ್ ತಂದೆ ತಾಯಿಯ ಆಶೀರ್ವಾದ ಪಡೆದ ಪುತ್ತಿಲ

0

ಬೆಳ್ಳಾರೆ : ಹಿಂದುತ್ವಕ್ಕಾಗಿ ಪ್ರಾಣ ನೀಡಿದ ಪ್ರವೀಣ್ ನೆಟ್ಟಾರ್ ನಮಗೆ ಆದರ್ಶ ಎಂದು ಪುತ್ತೂರು ವಿಧಾನಸಭಾ ಕ್ಷೇತ್ರದ ಪಕ್ಷೇತರ ಅಭ್ಯರ್ಥಿ ಅರುಣ್ ಕುಮಾರ್ ಪುತ್ತಿಲ ಹೇಳಿದರು.

ದುಷ್ಕರ್ಮಿಗಳಿಂದ ಹತ್ಯೆಯಾದ ದಿ.ಪ್ರವೀಣ್ ನೆಟ್ಟಾರು ಅವರ ಮನೆಗೆ ಭೇಟಿ ನೀಡಿದ ಅವರು ಪ್ರವೀಣ್‌ರವರ ಹೆತ್ತವರ ಆಶೀರ್ವಾದ ಪಡೆದರು.
ಈ ಸಂದರ್ಭದಲ್ಲಿ ದಿ.ಪ್ರವೀಣ್ ನೆಟ್ಟಾರು ಅವರ ಮನೆಯಲ್ಲಿ ಸರ್ಪಸಂಸ್ಕಾರ ಕಾರ್ಯಕ್ರಮ ನಡೆಯುತ್ತಿತ್ತು. ಬಳಿಕ ಪ್ರಸಾದ ಸ್ವೀಕರಿಸಿ ಹೆತ್ತವರ ಆಶೀರ್ವಾದ ಪಡೆದುಕೊಂಡರು. ಪ್ರವೀಣ್ ತಂದೆ ಶೇಖರ್ ಪೂಜಾರಿ, ತಾಯಿ ರತ್ನಾವತಿ, ಪತ್ನಿ ನೂತನ ಮೊದಲಾದವರಿದ್ದರು.

LEAVE A REPLY

Please enter your comment!
Please enter your name here