ವಿಟ್ಲ:ಯುವವಾಹಿನಿ ಪದಗ್ರಹಣ ಸಮಾರಂಭದಲ್ಲಿ ಜೆಡಿಎಸ್ ದಿವ್ಯಾಪ್ರಭಾ

0

ಪುತ್ತೂರು: ಕರ್ನಾಟಕ ರಾಜ್ಯ ಪ್ರಶಸ್ತಿ ಪುರಸ್ಕೃತ ಯುವವಾಹಿನಿಯ ವಿಟ್ಲ ಘಟಕದ 2023-24ನೇ ಸಾಲಿನ ನೂತನ ಪದಾಧಿಕಾರಿಗಳ ಪದಗ್ರಹಣ ಸಮಾರಂಭ ಎ.23 ರಂದು ನಡೆಯಿತು. ಸಮಾರಂಭದಲ್ಲಿ ಭಾಗವಹಿಸಿದ ಪುತ್ತೂರು ಕ್ಷೇತ್ರದ ಜೆಡಿಎಸ್‌ ಅಭ್ಯರ್ಥಿ ಶ್ರೀಮತಿ ದಿವ್ಯಾ ಪ್ರಭಾ ಗೌಡ ಯುವವಾಹಿನಿ ಘಟಕದ ಕಾರ್ಯಕರ್ತರೊಂದಿಗೆ ಸಮಾಲೋಚನಾ ಸಭೆ ನಡೆಸಿದರು. ಯುವವಾಹಿನಿ ಅಧ್ಯಕ್ಷ ಯಶವಂತ ಎನ್ ಮತ್ತು ಕಾರ್ಯದರ್ಶಿ ಹರೀಶ್ ಕೆ ದಿವ್ಯಾ ಪ್ರಭಾ ಅವರನ್ನು ಸ್ವಾಗತಿಸಿ ಸನ್ಮಾನಿಸಿದರು.ಈ ವೇಳೆ ಮಾತನಾಡಿದ ದಿವ್ಯಾ ಪ್ರಭಾ ನೆರೆದಿದ್ದ ಯುವ ಸಮೂಹದೊಂದಿಗೆ ಮತಯಾಚನೆ ಮಾಡಿದರು. ಈ ಸಂದರ್ಭದಲ್ಲಿ ಜೆಡಿಎಸ್ ಮುಖಂಡರಾದ ಹಮೀದ್ ವಿಟ್ಲ, ಪ್ರಭಾಕರ್ ಸಾಲ್ಯಾನ್, ಝೊಹರಾ ನಿಸಾರ್, ಶ್ರೀಮತಿ ಪದ್ಮಮಣಿ, ಹರೀಶ್ ಕೊಟ್ಟಾರಿ, ಜಾಫರ್ ಖಾನ್ ಮತ್ತಿತರರು ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here