ಪುತ್ತೂರು ಯೋಗ ಕೇಂದ್ರದಿಂದ ಜೆಡಿಎಸ್‌ ಅಭ್ಯರ್ಥಿಗೆ ಮನವಿ ಪತ್ರ

0

ಪುತ್ತೂರು : ಯೋಗ ಕೇಂದ್ರ, ಪುತ್ತೂರು ಇದರ ಪದಾಧಿಕಾರಿಗಳು ಇಂದು ಪುತ್ತೂರು ವಿಧಾನಸಭಾ ಕ್ಷೇತ್ರದ ಜೆಡಿಎಸ್ ಅಭ್ಯರ್ಥಿ ಶ್ರೀಮತಿ ದಿವ್ಯ ಪ್ರಭಾ ಗೌಡ ರನ್ನು ಭೇಟಿ ನೀಡಿ ಬಹಿರಂಗ ಪತ್ರ ಹಾಗೂ ಮನವಿಯನ್ನು ನೀಡಿದರು.

ಶಾಸಕರಾಗಿ ಆಯ್ಕೆಯಾದಲ್ಲಿ ಪುತ್ತೂರು ಸರ್ಕಾರಿ ಕಚೇರಿಗಳಲ್ಲಿ ಭ್ರಷ್ಟಾಚಾರ ರಹಿತ ಹಾಗೂ ಬ್ರೋಕರ್ ರಹಿತ ಸೇವೆ ದೊರಕಬೇಕು, ಪುತ್ತೂರಿನ ಪರಿಸರ ಸಂರಕ್ಷಣೆ, ಜಾನುವಾರು ಕಳ್ಳತನ ತಡೆ , ಮಳೆ ನೀರಿನ ಕೊಯ್ಲು ಹಾಗೂ ಪುತ್ತೂರಿನ ಸಮಗ್ರ ಅಭಿವೃದ್ಧಿ ಕಾರ್ಯಗಳು ನಡೆಯಬೇಕು ಹೀಗೆ ಹಲವು ಬೇಡಿಕೆಗಳನ್ನು ಒಳಗೊಂಡ ಮನವಿ ಪತ್ರ ನೀಡಿದರು. ಈ ಸಂಧರ್ಭದಲ್ಲಿ ಯೋಗ ಕೇಂದ್ರ, ಪುತ್ತೂರು ಅಧ್ಯಕ್ಷರಾದ ಶ್ರೀ ಗಿರೀಶ್ ಮಳಿ, ಪ್ರಧಾನ ಕಾರ್ಯದರ್ಶಿ ಪ್ರಸಾದ್ ಪಾಣಾಜೆ, ವಕೀಲರಾದ ಕೃಷ್ಣ ಪ್ರಸಾದ್ ನಡಸರ್,ವಿಲ್ಮಾ, ಪ್ರಿಯಾ ಮತ್ತಿತರರು ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here