ಪುತ್ತಿಲ ಹಿಂದುತ್ವಕ್ಕಾಗಿ ಏನೂ ಮಾಡಿಲ್ಲ- ಡಾ ಭಟ್‌

0

ಪುತ್ತೂರು : ವಿಶ್ವವೇ ಬಿಜೆಪಿಯನ್ನು ಹಿಂದುತ್ವದ ಪಾರ್ಟಿ, ಕಮ್ಯೂನಲ್‌ ಪಾರ್ಟಿ ಎಂದು ಹೇಳುತ್ತಿದೆ. ಬಿಜೆಪಿಗಿಂತ ದೊಡ್ಡ ಹಿಂದುತ್ವವೇ ಇಲ್ಲ. ಎಂದು ಕಲ್ಲಡ್ಕ ಪ್ರಭಾಕರ್‌ ಭಟ್‌ ಹೇಳಿದ್ದಾರೆ.

ಪುತ್ತೂರಿನಲ್ಲಿ ಬಿಜೆಪಿಯಿಂದ ಬಂಡಾಯವೆದ್ದು ಪಕ್ಷೇತರ ಅಭ್ಯರ್ಥಿಯಾಗಿ ಸ್ಫರ್ದಿಸುತ್ತಿರುವ ಅರುಣ್‌ ಕುಮಾರ್‌ ಪುತ್ತಿಲ ಹಿಂದುತ್ವಕ್ಕಾಗಿ ಯಾವುದೇ ಕೆಲಸ ಮಾಡಿಲ್ಲ, ಗೋಸಾಗಾಟದ ವೇಳೆ ಗುಂಪಿನ ಮುಂದೆ ನಿಂತಿರಬಹುದು. ಅಮಿತ್‌ ಷಾ ಮಾತನ್ನು ಧಿಕ್ಕರಿಸಿದ ವ್ಯಕ್ತಿ ಹಿಂದುತ್ವಕ್ಕೆ ಏನು ಮಾಡಬಹುದು ಎಂದು ಖಾರವಾಗಿ ಪ್ರಶ್ನಿಸಿರುವ ಭಟ್‌ ಬಿಜೆಪಿಗಿಂತ ದೊಡ್ಡ ಹಿಂದುತ್ವ ಯಾವುದು ಎಂಬ ಪ್ರಶ್ನೆ ಮುಂದಿಟ್ಟಿದ್ದಾರೆ.

ಪ್ರವೀಣ್‌ ನೆಟ್ಟಾರು ಗೃಹ ಪ್ರವೇಶ ಸಂದರ್ಭದಲ್ಲಿ ಮಾಧ್ಯಮದೊಂದಿಗೆ ಮಾತನಾಡಿದ ಆರ್‌ ಎಸ್‌ ಎಸ್‌ ಪ್ರಮುಖ್‌ ಕಲ್ಲಡ್ಕ ಪ್ರಭಾಕರ್‌ ಭಟ್‌ ಸದ್ಯವೆ ಪುತ್ತಿಲನ ಬಂಡವಾಳ ಹೊರಬೀಳಲಿದೆ ಎಂದು ಹೇಳಿದ್ದಾರೆ.

ಪುತ್ತಿಲ ಬಗ್ಗೆ ಪ್ರಭಾಕರ್‌ ಭಟ್‌ ಏನು ಹೇಳಿದ್ದಾರೆ ಎಂಬ ಬಗ್ಗೆ ತಿಳಿಯಲು ಕೆಳಗೆ ಕ್ಲಿಕ್‌ ಮಾಡಿ

LEAVE A REPLY

Please enter your comment!
Please enter your name here