ಎನ್‌ಎಂಎಂಎಸ್ ವಿದ್ಯಾರ್ಥಿ ವೇತನಕ್ಕೆ ಇರ್ದೆ ಉಪ್ಪಳಿಗೆ ಪ್ರೌಢ ಶಾಲಾ ವಿದ್ಯಾರ್ಥಿಗಳು ಆಯ್ಕೆ

0

ಪುತ್ತೂರು:2022-23ನೇ ಸಾಲಿನ ರಾಷ್ಟ್ರೀಯ ಪ್ರತಿಭಾನ್ವೇಷನಾ ಪರೀಕ್ಷೆ(ಎನ್‌ಎಂಎಂಎಸ್)ಯಲ್ಲಿ ಇರ್ದೆ-ಉಪ್ಪಳಿಗೆ ಸರಕಾರಿ ಪ್ರೌಢಶಾಲಾ ವಿದ್ಯಾರ್ಥಿಗಳಾದ, ಅವಳಿ ಸಹೋದರರಾದ ಯಶ್ವಿನ್ ಆಳ್ವ ಹಾಗೂ ಯಶ್ವಿತ್ ಆಳ್ವರವರು ಉತ್ತೀರ್ಣರಾಗಿ ವಿದ್ಯಾರ್ಥಿ ವೇತನಕ್ಕೆ ಆಯ್ಕೆಯಾಗಿದ್ದಾರೆ.


8ನೇ ತರಗತಿಯ ವಿದ್ಯಾರ್ಥಿಗಳಾಗಿರುವ ಇವರು ಪಾಣಾಜೆ ಸೂರಂಬೈಲು ನಿವಾಸಿ ಶ್ರೀಧರ ಆಳ್ವ ಮತ್ತು ದುರ್ಗಾಂಬಿಕ ದಂಪತಿ ಪುತ್ರರು. ಈ ಅವಳಿ ಸಹೋದರರು ಸೂರಂಬೈಲು ಹಿರಿಯ ಪ್ರಾಥಮಿಕ ಶಾಲಾ ಹಿರಿಯ ವಿದ್ಯಾರ್ಥಿಗಳಾಗಿರುತ್ತಾರೆ.

LEAVE A REPLY

Please enter your comment!
Please enter your name here