ಬೇರ ಚಲನಚಿತ್ರದ ನಿರ್ಮಾಪಕ ದಿವಾಕರ ದಾಸ್ ನೇರ್ಲಾಜೆ ವಿಟ್ಲ ಪಂಚಲಿಂಗೇಶ್ವರ ದೇವಸ್ಥಾನಕ್ಕೆ ಭೇಟಿ

0

ವಿಟ್ಲ: ಎಸ್.ಎಲ್.ವಿ. ಬುಕ್ಸ್ ಇಂಡಿಯಾ ಪೈ ಲಿ. ಆಡಳಿತ ನಿರ್ದೇಶಕರು, ಬೇರ ಚಲನ ಚಿತ್ರದ ನಿರ್ಮಾಪಕರಾದ ದಿವಾಕರ ದಾಸ್ ನೇರ್ಲಾಜೆರವರು ವಿಟ್ಲ ಪಂಚಲಿಂಗೇಶ್ವರ ದೇವಸ್ಥಾನಕ್ಕೆ ಭೇಟಿ ನೀಡಿದರು.


ದಿವಾಕರ ದಾಸ್ ನೇರ್ಲಾಜೆ ರವರ ಎಸ್.ಎಲ್.ವಿ. ಕಲರ್ಸ್ ಬ್ಯಾನರ್ ನ ಅಡಿಯಲ್ಲಿ ನಿರ್ಮಾಣವಾಗಿರುವ ಚೊಚ್ಚಲ ಚಿತ್ರ ‘ಬೇರ’ ಜೂ.16ರಂದು ರಾಜ್ಯಾದ್ಯಂತ ತೆರೆ ಕಾಣಲಿದೆ. ಕರಾವಳಿ ಭಾಗದ ಕಥಾ ಹಂದರವನ್ನು ಹೊಂದಿರುವ ಈ ಚಿತ್ರದಲ್ಲಿ ಕರಾವಳಿಯ ವಿವಿಧ ಕಲಾವಿದರು ಅಭಿನಯಿಸಿದ್ದಾರೆ ಮಾತ್ರವಲ್ಲದೆ ಕರಾವಳಿಯ ವಿವಿಧ ಕಡೆಗಳಲ್ಲಿ ಇದು ಚಿತ್ರೀಕರಣಗೊಂಡಿದೆ.


ವಿಟ್ಲ ಪಂಚಲಿಂಗೇಶ್ವರ ದೇವಸ್ಥಾನಕ್ಕೆ ಆಗಮಿಸಿದ ದಿವಾಕರ ದಾಸ್ ನೇರ್ಲಾಜೆ ರವರು ವಿಶೇಷ ಪ್ರಾರ್ಥನೆ ಸಲ್ಲಿಸಿದರು. ಈ ಸಂದರ್ಭದಲ್ಲಿ ವಿಟ್ಲ ಅರಮನೆಯ ಕೃಷ್ಣಯ್ಯ ವಿಟ್ಲ, ಜಯರಾಮ ಬಲ್ಲಾಳ್, ರಾಜಾರಾಮ ಶೆಟ್ಟಿ ಕೋಲ್ಪೆಗುತ್ತು, ರವಿಪ್ರಕಾಶ್ ಎಸ್., ಮೋಹನ್ ಕಟ್ಟೆ, ಸೂರ್ಯ ಆಚಾರ್ಯ ವಿಟ್ಲ ಮೊದಲಾದವರು ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here