ಕಡಬ ಸುದ್ದಿಬಿಡುಗಡೆ ವರದಿಗಾರ ವಿಜಯ ಕುಮಾರ್‌ಗೆ ಪಿತೃವಿಯೋಗ

0

ಕಡಬ: ಸುದ್ದಿಬಿಡುಗಡೆ ಪತ್ರಿಕೆಯ ಕಡಬ ವರದಿಗಾರ ವಿಜಯಕುಮಾರ್ ಪೆರ್ಲ ಅವರ ತಂದೆ, ಕಡಬ ತಾಲೂಕು ಕುಟ್ರುಪ್ಪಾಡಿ ಗ್ರಾಮದ ಪೆರ್ಲ ನಿವಾಸಿ, ಕೃಷಿಕ ಮೋನಪ್ಪ ಗೌಡ(75ವ.)ರವರು ಅಲ್ಪ ಕಾಲದ ಅಸೌಖ್ಯದಿಂದ ಜೂ.28ರಂದು ಮಧ್ಯಾಹ್ನ ಸ್ವಗೃಹದಲ್ಲಿ ನಿಧನರಾದರು.


ಮೃತರು ಪುತ್ರರಾದ ಪತ್ರಕರ್ತ ವಿಜಯ ಕುಮಾರ್, ಕಮಲಾಕ್ಷ, ಪುತ್ರಿಯರಾದ ವೇದಾವತಿ, ನೇತ್ರಾವತಿ, ಗುಲಾಬಿ ಅವರನ್ನು ಅಗಲಿದ್ದಾರೆ. ಮೃತರ ಮನೆಗೆ ಬಿಜೆಪಿ ಪ್ರಶಿಕ್ಷ ಪ್ರಕೋಷ್ಠದ ಜಿಲ್ಲಾ ಸಂಚಾಲಕ ಕೃಷ್ಣ ಶೆಟ್ಡಿ ಕಡಬ, ಕಡಬ ತಾಲೂಕು ಪತ್ರಕರ್ತರ ಸಂಘದ ಅಧ್ಯಕ್ಷ ನಾಗರಾಜ್ ಎನ್.ಕೆ, ಸ್ಥಾಪಕಾಧ್ಯಕ್ಷ ಕೆ.ಎಸ್.ಬಾಲಕೃಷ್ಣ ಕೊಯಿಲ, ಸದಸ್ಯರಾದ ಪ್ರವೀಣ್ ರಾಜ್ ಕೊಯಿಲ, ಪ್ರಕಾಶ್ ಕೋಡಿಂಬಾಳ, ದಿವಾಕರ ಮುಂಡಾಲ, ಉದ್ಯಮಿ ಶಾಂತಾರಾಮ ಶೆಟ್ಟಿ, ಸಾಮಾಜಿಕ ಕಾರ್ಯಕರ್ತ ಮೋಹನ ಕೋಡಿಂಬಾಳ,ಕಡಬ ಗ್ರಾ.ಪಂ. ಮಾಜಿ ಸದಸ್ಯ ಸೈಮನ್ ಸಿ.ಜೆ. ಪ್ರಮುಖರಾದ ಸಾಜು ಕಡಬ, ಪ್ರಕಾಶ್ ಎನ್.ಕೆ. ಪ್ರಮೋದ್ ರೈ ನಂದುಗುರಿ,ಸೇರಿದಂತೆ ಹಲವಾರು ಪ್ರಮುಖರು ಆಗಮಿಸಿ ಸಂತಾಪ ಸೂಚಿಸಿದರು.

LEAVE A REPLY

Please enter your comment!
Please enter your name here