ತಮಿಳುನಾಡು ಧರ್ಮಪುರಂ ಅಧೀನಂ(ಮಠ) ಕುಂಭಾಭಿಷೇಕದಲ್ಲಿ ಸ್ಯಾಕ್ಸೋಪೋನ್ ವಾದಕ ಡಾ| ಪಿ ಕೆ ಗಣೇಶ್ ಅವರಿಗೆ ಚಿನ್ನದಪದಕ, ಸ್ಯಾಕ್ಸೋಪೋನ್ ಕಲಾನಿಧಿ ಪ್ರಶಸ್ತಿ ಪ್ರದಾನ

0

ಪುತ್ತೂರು: ನೂತನ ಸಂಸತ್ ನಲ್ಲಿ ಪ್ರಧಾನಿಗೆ ಸೆಂಗೋಲ್ ‌ನೀಡಿದ ತಮಿಳುನಾಡಿನ ಮೈಲಾಡುತುರೈಯಲ್ಲಿರುವ ಧರ್ಮಪುರಂ ಅಧೀನಂ 27ನೇ ಗುರು ಮಹಾ ಸನ್ನಿಧಾನಂ ತಿರುಪ್ಪಾನಂದಲ್ ಕುಂಬಾಭಿಷೇಕದಲ್ಲಿ ಪುತ್ತೂರು ಇತಿಹಾಸ ಪ್ರಸಿದ್ದ ಶ್ರೀ ಮಹಾಲಿಂಗೇಶ್ವರ ದೇವಳದ ಪ್ರಧಾನ ಸ್ಯಾಕ್ಸೋಪೋನ್ ವಾದಕ ಡಾ| ಪಿ ಕೆ ಗಣೇಶ್ ಅವರಿಗೆ ಚಿನ್ನದ ಪದಕ ಮತ್ತು ಸ್ಯಾಕ್ಸೋಫೋನ್ ಕಲಾನಿಧಿ ಪ್ರಶಸ್ತಿಯನ್ನು ಪ್ರದಾನ ಮಾಡಲಾಯಿತು.

ತಮಿಳುನಾಡಿನ ಮೈಲಾಡುತುರೈಯಲ್ಲಿರುವ ಧರ್ಮಪುರಂ ಅಧೀನಂ 27ನೇ ಗುರು ಮಹಾ ಸನ್ನಿಧಾನಂ ತಿರುಪ್ಪಾನಂದಲ್ ಕುಂಬಾಭಿಷೇಕದಲ್ಲಿ ನಡೆದ ಸಂಗೀತ ಕಚೇರಿಯಲ್ಲಿ ಡಾ| ಪಿ ಕೆ ಗಣೇಶ್ ಅವರ ಕಾರ್ಯಕ್ರಮವಿತ್ತು. ಇದೇ ಸಂದರ್ಭದಲ್ಲಿ ನಡೆದ ಧಾರ್ಮಿಕ ಕಾರ್ಯಕ್ರಮದಲ್ಲಿ ಅವರಿಗೆ ಅಲ್ಲಿನ ಶ್ರೀಗಳು ಚಿನ್ನದ ಪದಕ ಮತ್ತು ಸ್ಯಾಕ್ಸೋಫೋನ್ ಕಲಾನಿಧಿ ಪ್ರಶಸ್ತಿಯನ್ನು ಪ್ರದಾನ ಮಾಡಿದರು. ಡಾ| ಪಿ ಕೆ ಗಣೇಶ್ ಅವರು ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ಸಹಿತ ಹಲವಾರು ಪ್ರಶಸ್ತಿಗಳನ್ನು ತನ್ನಮುಡಿಗೇರಿಸಿಕೊಂಡವರು

LEAVE A REPLY

Please enter your comment!
Please enter your name here