ಜೈನಮುನಿ ಹತ್ಯೆ ಪ್ರಕರಣ-ಘಟನೆಯನ್ನು ಖಂಡಿಸಿದ ಬಜರಂಗದಳ-ಸೂಕ್ತ ಕ್ರಮಕ್ಕೆ ಆಗ್ರಹ

0

ಪುತ್ತೂರು: ಅಹಿಂಸಾ ಪರಮ ಧರ್ಮ ಎನ್ನುವ ಉದಾತ್ತ ಮೌಲ್ಯಗಳನ್ನು ಜೀವನದಲ್ಲಿ ಅಳವಡಿಸಿ ಜೀವಿಸುವ ,ಜಗತ್ತಿಗೆ ಶಾಂತಿ ಹಾಗೂ ಅಹಿಂಸೆಯ ಭೋಧನೆಯನ್ನು ಮಾಡುವ ಜೈನ ಧರ್ಮದ ಪೂಜ್ಯ ಕಾಮಕುಮಾರ ನಂದಿ ಮಹಾರಾಜ ಮುನಿಗಳನ್ನು ಬೆಳಗಾವಿ ಜಿಲ್ಲೆಯ ಹಿರೇಕೋಡಿಯಲ್ಲಿ ಬರ್ಬರವಾಗಿ ಕೊಲೆ ಮಾಡಲಾಗಿದೆ.

ಇದೊಂದು ಅತೀ ಬರ್ಭರ ಹೀನ ಕೃತ್ಯವಾಗಿದ್ದು ಈ ಘಟನೆಯನ್ನು ವಿಶ್ವ ಹಿಂದೂ ಪರಿಷತ್ ಬಲವಾಗಿ ಖಂಡಿಸುತ್ತದೆ ಎಂದು ಕರ್ನಾಟಕ ದಕ್ಷಿಣ ಪ್ರಾಂತ ಬಜರಂಗದಳ ಪ್ರಾಂತ ಸಹ ಸಂಯೋಜಕ್ ಮುರಳೀಕೃಷ್ಣ ಹಸಂತ್ತಡ್ಕ ಹೇಳಿದ್ದಾರೆ. ಹಿಂಸಾತ್ಮಕವಾಗಿ ಹತ್ಯೆಗೈದ ನರ ರೂಪಿ ರಾಕ್ಷಸರನ್ನು ತಕ್ಷಣ ಕಠಿಣಾತಿ ಕಠಿಣ ಶಿಕ್ಷೆಗೆ ಗುರಿ ಪಡಿಸಿ ಸಮಾಜದ ಸಾಧು, ಸಂತರಾದಿ ಮುನಿಗಳಿಗೆ ಸರ್ಕಾರ ಸೂಕ್ತ ರಕ್ಷಣೆ ಒದಗಿಸಬೇಕೆಂದು ಸರ್ಕಾರವನ್ನು ಬಜರಂಗದಳ ಒತ್ತಾಯಿಸಿದೆ.


LEAVE A REPLY

Please enter your comment!
Please enter your name here