ಕೋಡಿಂಬಾಡಿಯಲ್ಲಿ ಜಿನಸು ಅಂಗಡಿ ಹೊಂದಿದ್ದ ಅನಂತ ನಾಯಕ್ ನಿಧನ

0

ಪುತ್ತೂರು: ಪೆರ್ನೆ ಸಮೀಪದ ಮೈರ ಮನೆತನದ ಹಿರಿಯರಾದ ಅನಂತ ನಾಯಕ್(82ವ)ರವರು ಜು.10ರಂದು ಸ್ವಗೃಹದಲ್ಲಿ ನಿಧನರಾದರು.

ಇವರು ಸುಮಾರು 50 ವರ್ಷಗಳಿಂದ ಕೋಡಿಂಬಾಡಿಯಲ್ಲಿ ಜಿನಸು ಅಂಗಡಿ ವ್ಯವಹಾರ ನಡೆಸಿ ಚಿರಪರಿಚಿತರಾಗಿದ್ದರು. ಮೃತರು ಪತ್ನಿ ಸುಶೀಲಾ, ಪುತ್ರರಾದ ಮುಂಬೈಯಲ್ಲಿ ಇಂಜಿನಿಯರ್ ಆಗಿರುವ ರಾಧಾಕೃಷ್ಣ ನಾಯಕ್, ಈ ಹಿಂದೆ ಮಹಾರಾಷ್ಟ್ರದಲ್ಲಿ ಇಂಜಿನಿಯರ್ ಆಗಿದ್ದು ಪ್ರಸ್ತುತ ಬಂಟ್ವಾಳ ತಾಲೂಕಿನ ವಗ್ಗದಲ್ಲಿ ಕೃಷಿ ಮತ್ತು ವ್ಯಾಪಾರ ವೃತ್ತಿ ನಡೆಸುತ್ತಿರುವ ವಾಮನ ನಾಯಕ್, ಪುತ್ತೂರಿನ ಆದರ್ಶ ಆಸ್ಪತ್ರೆಯ ಖ್ಯಾತ ಎಲುಬು ಮತ್ತು ಕೀಲು ತಜ್ಞ ಡಾ. ಭಾಸ್ಕರ ಎಂ., ಪೆರ್ನೆಯ ನಾಯಕ್ ಜನರಲ್ ಸ್ಟೋರ್‍ಸ್‌ನ ಮಾಲಕ ಸುಧಾಕರ ನಾಯಕ್, ಪುತ್ರಿಯರಾದ ಆಶಾ ಕಮಲಾಕ್ಷ ಪಾಟೀಲ್ ಪರ್ಕಳ ಉಡುಪಿ, ಚಂದ್ರಕಲಾ ಅನಂತ ಪದ್ಮನಾಭ ಬೆಂಗಳೂರು, ಸೊಸೆಯಂದಿರಾದ ಶಾರದಾ ರಾಧಾಕೃಷ್ಣ ನಾಯಕ್, ಪ್ರಮೀಳಾ ವಾಮನ ನಾಯಕ್, ಸೌಮ್ಯ ಭಾಸ್ಕರ, ಸುಮಾ ಸುಧಾಕರ ನಾಯಕ್, ಅಳಿಯಂದಿರು ಮತ್ತು ಮೊಮ್ಮಕ್ಕಳನ್ನು ಅಗಲಿದ್ದಾರೆ. ಅನಂತ ನಾಯಕ್‌ರವರ ಉದ್ಯಮ ಸೇವೆಯನ್ನು ಪರಿಗಣಿಸಿ ಕೆಲವು ವರ್ಷಗಳ ಹಿಂದೆ ಮಠಂತಬೆಟ್ಟು ಶ್ರೀ ಮಹಿಷಮರ್ದಿನಿ ದೇವಸ್ಥಾನದ ಧಾರ್ಮಿಕ ಸಭೆಯಲ್ಲಿ ಗೌರವಿಸಿ ಸನ್ಮಾನಿಸಲಾಗಿತ್ತು.

LEAVE A REPLY

Please enter your comment!
Please enter your name here