ಕಡಬ: ಬೀಳ್ಕೊಡುಗೆ ಕಾರ್ಯಕ್ರಮ ಮತ್ತು ಸಾಧಕರಿಗೆ ಸನ್ಮಾನ ಕಾರ್ಯಕ್ರಮ

0

ನೂಜಿಬಾಳ್ತಿಲ: ಕಡಬ ವಲಯದ ಅಂಗನವಾಡಿ ಕಾರ್ಯಕರ್ತೆ ಹಾಗೂ ಸಹಾಯಕಿರ ಸಂಘದ ವತಿಯಿಂದ 33 ವರ್ಷ ಅಂಗನವಾಡಿ ಕಾರ್ಯಕರ್ತೆಯಾಗಿ ಸೇವೆ ಸಲ್ಲಿಸಿ ನಿವೃತ್ತಿಗೊಂಡ ಅಮಿನ ಕೆ. ಕಲ್ಲುಗುಡ್ಡೆ ಹಾಗೂ 37 ವರ್ಷ ಸೇವೆ ಸಲ್ಲಿಸಿ ನಿವೃತ್ತಿಗೊಂಡ ಅಂಗನವಾಡಿ ಕಾರ್ಯಕರ್ತೆ ಗಂಗಮ್ಮ ಪಿಜಕ್ಕಳ ಮತ್ತು ತಾಲೂಕು ,ಜಿಲ್ಲಾ ಮಟ್ಟ. ‘ರಾಜ್ಯ ಮಟ್ಟ ಹಾಗೂ ರಾಷ್ಟ್ರಮಟ್ಟದಲ್ಲಿ ಓಟ ಮತ್ತು ವೇಗದ ನಡಿಗೆಯಲ್ಲಿ ಮೂರು ಗೋಲ್ಡ್ ಮೆಡಲ್ ಒಂದು ಬೆಳ್ಳಿ ಒ೦ದು ‘ಕಂಚಿನ ಪದಕ ಪಡೆದ 72 ವರ್ಷ ಪ್ರಾಯದ ಸಾಧಕರಾದ ಜನಾರ್ಧನ ಗೌಡ ಪೂವಳ ಇವರ ಸನ್ಮಾನ ಕಾರ್ಯಕ್ರಮ ಜುಲೈ 8 ರಂದು ಕಡಬ ಶಾಲೆ ಅಂಗನವಾಡಿಯಲ್ಲಿ ನಡೆಯಿತು.

ಪುತ್ತೂರು ತಾಲೂಕು ಯುನಿಯನ್ ನ ಮಾಜಿ ಅಧ್ಯಕ್ಷೆಯಾದ ಮಲ್ಲಿಕಾ ಕಾರ್ಯಕವನ್ನು ಉದ್ಘಾಟಿಸಿ ಶುಭ ಹಾರೈಸಿದರು, ಕಡಬ ವಲಯದ ಯುನಿಯನ್ ಅಧ್ಯಕ್ಷೆ ಪ್ರಫುಲ್ಲ ಅಧ್ಯಕ್ಷತೆ ವಹಿಸಿ ಪ್ರಾಸ್ತಾವಿಕ ಮಾತನಾಡಿದರು. .ಕಡಬ ವಲಯ ಯುನಿಯನ್ ಮಾಜಿ ಅಧ್ಯಕ್ಷೆ ಗುಣವತಿ ಕಾರ್ಯದಶಿ೯ ಮೋಹಿನಿ ವೇದಿಕೆಯಲ್ಲಿ ಉಪಸ್ಥಿತರಿದ್ದರು. ಕಾರ್ಯಕ್ರಮದಲ್ಲಿ ಅಂಗನವಾಡಿ ಕಾರ್ಯಕರ್ತೆರು ‘ಸಹಾಯಕಿರು ಉಪಸ್ಥಿತರಿದ್ದರು.ಪ್ರಫುಲ್ಲ ಕುಬಲಾಡಿ ಸ್ವಾಗತಿಸಿ,ಮಾಜಿ ಸ್ಥಾಪಕ ಅಧ್ಯಕ್ಷರು ಪುತ್ತೂರು ತಾಲೂಕು ಬೈನಾಬಿ ಪನ್ಯ ಕಾರ್ಯಕ್ರಮ ನಿರೂಪಿಸಿ,ಪದ್ಮಾವತಿ ಪ್ರಾರ್ಥಿಸಿದರು. ಕಡಬ ಅಂಗನವಾಡಿ ಕಾರ್ಯಕರ್ತೆ ಸುಮಿತ್ರಾ ಸಹಾಯಕಿ ಶಿಲ್ಪಾ ಸಹಕರಿಸಿದರು.

ಸನ್ಮಾನ ಕಾರ್ಯಕ್ರಮ
ಕಾರ್ಯಕ್ರಮದಲ್ಲಿ ನಿವೃತ್ತ ಅಂಗನವಾಡಿ ಕಾರ್ಯಕರ್ತೆ ಅಮೀನ ಕೆ. ಕಲ್ಲುಗುಡ್ಡೆ ಪಿಜಕ್ಕಳ ಅಂಗನವಾಡಿ ಕಾರ್ಯಕರ್ತೆ ಗಂಗಮ್ಮ ಮತ್ತು ಸಾಧಕರಾದ ಜರ್ನಾಧನಗೌಡ ಪೂವಳ ಇವರನ್ನು ಶಾಲು, ಹಾರ, ಫಲ-ಪುಷ್ಪ ಸ್ಮರಣಿಕೆ ನೀಡಿ ಸನ್ಮಾನಿಸಿ ಗೌರವಿಸಲಾಯಿತು.

LEAVE A REPLY

Please enter your comment!
Please enter your name here