ಕಡಬದಲ್ಲಿ ಬಿರುವೆರ್ನ ಕೆಸರ್ದ ಪರ್ಬ-ಪೂರ್ವಭಾವಿ ಸಭೆ

0

ಕಡಬ: ಯುವವಾಹಿನಿ ಕಡಬ ಘಟಕದ ವತಿಯಿಂದ ಸೆ.17ರಂದು ಕಡಬದಲ್ಲಿ ನಡೆಯಲಿರುವ ಕಡಬ ತಾಲೂಕಿನ ಬಿಲ್ಲವ ಸಮಾಜದ ಬಾಂಧವರಿಗೆ “ಬಿರುವೆರ್ನ ಕೇಸರ್ದ ಪರ್ಬ” ಕಾರ್ಯಕ್ರಮ ನಡೆಸುವ ಬಗ್ಗೆ ಪೂರ್ವಭಾವಿ ಸಭೆಯು ಆ.6ರಂದು ಕಡಬ ಶ್ರೀ ದುರ್ಗಾಂಬಿಕಾ ಅಮ್ಮನವರ ದೇವಸ್ಥಾನದಲ್ಲಿ, ಘಟಕದ ಅಧ್ಯಕ್ಷ ಕೃಷ್ಣಪ್ಪ ಅಮೈಯವರ ಅಧ್ಯಕ್ಷತೆಯಲ್ಲಿ ನಡೆಯಿತು.
ಸಭೆಯಲ್ಲಿ ಬಿಲ್ಲವ ಸಂಘ ಮರ್ದಾಳ ವಲಯ ಸಂಚಾಲಕ ಸತೀಶ್ .ಕೆ ಐತ್ತೂರು, ಯುವವಾಹಿನಿ ಕೇಂದ್ರ ಸಮಿತಿ ಮಂಗಳೂರು ಇದರ ಕ್ರೀಡಾ ನಿರ್ದೇಶಕ ಶಿವಪ್ರಸಾದ್ ನೂಚಿಲ, ಕಡಬ ಘಟಕದ ನಿಕಟ ಪೂರ್ವ ಅಧ್ಯಕ್ಷ ಪ್ರವೀಣ್ ಓಂಕಾಲ್, ಘಟಕದ ಕ್ರೀಡಾ ನಿರ್ದೇಶಕ ಸುರೇಶ್ ಪಾಲಪ್ಪೆ, ಘಟಕದ ಉಪಾಧ್ಯಕ್ಷ ಜಯಪ್ರಕಾಶ್ ದೋಳ, ವಿದ್ಯಾನಿಧಿ ನಿರ್ದೇಶಕಿ ಸರಿತಾ ಉಂಡಿಲ, ಭಜನಾ ನಿರ್ದೇಶಕಿ ಅನಿತಾ ಕುತ್ಯಾಡಿ, ಸಮಾಜ ಸೇವಾ ನಿರ್ದೇಶಕ ನವೀನ್ ಕೊಂಬಾರು, ನಯನ ಅಮೈ, ನಿಶ್ಮಿತಾ ಅಮೈ, ಪ್ರಶಾಂತ್ ಎನ್. ಎಸ್ ಕಡಬ ಘಟಕ ಕಾರ್ಯದರ್ಶಿ ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here