ಸರ್ವೆ ಕಲ್ಪಣೆ ಸರಕಾರಿ ಪ್ರೌಢಶಾಲಾ ಕಾರ್ಯಾಧ್ಯಕ್ಷರಾಗಿ ಸಿದ್ದೀಕ್ ಸುಲ್ತಾನ್ ಕೂಡುರಸ್ತೆ

0

ಪುತ್ತೂರು: ಸರಕಾರಿ ಪ್ರೌಡಶಾಲೆ ಸರ್ವೆ ಕಲ್ಪಣೆ ಇದರ ನೂತನ ಕಾರ್ಯಾದ್ಯಕ್ಷರಾಗಿ ಸಿದ್ದೀಕ್ ಸುಲ್ತಾನ್ ಕೂಡುರಸ್ತೆ ಇವರನ್ನು ಪುತ್ತೂರು ಬ್ಲಾಕ್ ಕಾಂಗ್ರೆಸ್ ಅದ್ಯಕ್ಷರಾದ ಎಂ. ಬಿ. ವಿಶ್ವನಾಥ ರೈ , ವಲಯ ಕಾಂಗ್ರೆಸ್ ಅದ್ಯಕ್ಷರಾದ ಎಸ್. ಡಿ. ವಸಂತ , ಬ್ಲಾಕ್ ಕಾಂಗ್ರೆಸ್ ಕಾರ್ಯದರ್ಶಿ ರಾಮಚಂದ್ರ ಸೊರಕೆ ಆದೇಶದ ಮೇರೆಗೆ ಪುತ್ತೂರು ಶಾಸಕರಾದ ಅಶೋಕ್ ಕುಮಾರ್ ರೈ ಯವರು ನೇಮಕ ಮಾಡಿರುತ್ತಾರೆ.

ಸಿದ್ದೀಕ್ ಸುಲ್ತಾನ್ ಅವರು ತಿಂಗಳಾಡಿ ಶಂಸುಲ್ ಉಲಮಾ ಇಸ್ಲಾಮಿಕ್ ಎಜುಕೇಶನ್ ಸೆಂಟರ್ ಅಧ್ಯಕ್ಷರಾಗಿ, ರಿಫಾಯಿಯ್ಯ ಜುಮಾ ಮಸೀದಿ ಕೂಡುರಸ್ತೆ ಇದರ ಪ್ರಧಾನ ಕಾರ್ಯದರ್ಶಿಯಾಗಿ, ಯೂನಿಯನ್ ಆಫ್ ಮುಸ್ಲಿಂ ಕಮ್ಯೂನಿಟಿ ಪುತ್ತೂರು ಇದರ ನಿರ್ದೇಶಕರಾಗಿ, ಬ್ಲಾಕ್ ಕಾಂಗ್ರೆಸ್ ಪುತ್ತೂರು ಇದರ ಸಾಮಾಜಿಕ ಜಾಲತಾಣ ಅಧ್ಯಕ್ಷರಾಗಿ, ಸರ್ವೆ ವಲಯ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿಯಾಗಿ ಹಾಗೂ ಇನ್ನಿತರ ಹಲವಾರು ಸಾಮಾಜಿಕ, ಧಾರ್ಮಿಕ ಸೇವಾರಂಗದಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ.

LEAVE A REPLY

Please enter your comment!
Please enter your name here