ಅಂಚೆ ಇಲಾಖೆ ಪುತ್ತೂರು ವಿಭಾಗದಿಂದ ಸ್ವಾತಂತ್ರ್ಯ ದಿನಾಚರಣೆ

0

ಅಂಚೆ ಇಲಾಖೆಯ ಪುತ್ತೂರು ವಿಭಾಗದಿಂದ ಸ್ವಾತಂತ್ರ್ಯ ದಿನಾಚರಣೆ ನಡೆಯಿತು.


ಪುತ್ತೂರು ಅಂಚೆ ವಿಭಾಗದ ಹಿರಿಯ ಅಂಚೆ ಅಧೀಕ್ಷಕ ನವೀನ್ ಚಂದರ್ ಅವರ ನೇತೃತ್ವದಲ್ಲಿ ಧ್ವಜಾರೋಹಣ ನೆರವೇರಿಸಲಾಯಿತು. ಪುತ್ತೂರು ಪ್ರಧಾನ ಅಂಚೆ ಕಛೇರಿಯ, ಕಬಕ, ದರ್ಬೆ, ನೆಹರೂ ನಗರ, ಕೋರ್ಟ್ ಹಿಲ್ ಉಪ ಅಂಚೆ ಕಛೇರಿಗಳ ಸಿಬ್ಬಂದಿಗಳು ಉಪಸ್ಥಿತರಿದ್ದರು.


ಪುತ್ತೂರು ವಿಭಾಗದ ಧರ್ಮಸ್ಥಳ ಉಪ ಅಂಚೆ ಕಛೇರಿಯಿಂದ ಮಹಿಳಾ ಸಮ್ಮಾನ್ ಪ್ರಮಾಣ ಪತ್ರವನ್ನು ಪಡೆದ ಐದು ತಲೆಮಾರಿನ ಮಹಿಳೆಯರಾದ ಸೀತು (ಪ್ರಾಯ ೯೩ ವರ್ಷ), ಕಾವೇರಿ (ಪ್ರಾಯ 73 ವರ್ಷ), ನಳಿನಾಕ್ಷಿ (ಪ್ರಾಯ 48 ವರ್ಷ), ದಿವ್ಯ (ಪ್ರಾಯ 26 ವರ್ಷ) ಹಾಗೂ ಮಾನ್ವಿ (ಪ್ರಾಯ 2 ವರ್ಷ) ಇವರನ್ನು ಆಹ್ವಾನಿಸಿ, ಪ್ರಮಾಣ ಪತ್ರವನ್ನು ಹಸ್ತಾಂತರಿಸುವುದರೊಂದಿಗೆ ಗೌರವಿಸಿ, ಗುರುತಿಸಲಾಯಿತು.

ಪುತ್ತೂರು ಅಂಚೆ ವಿಭಾಗದ ಮತ್ತು ಪುತ್ತೂರು ಪ್ರಧಾನ ಅಂಚೆ ಕಛೇರಿಯ ನೌಕರರಿಂದ ದೇಶ ಭಕ್ತಿಯ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳು ಜರುಗಿತು.


LEAVE A REPLY

Please enter your comment!
Please enter your name here