ಕೆಲಸಕ್ಕೆ ಬಾರದಕ್ಕೆ ಜಾತಿ ನಿಂದನೆ- ಪ್ರಕರಣ ದಾಖಲು

0

ಪುತ್ತೂರು: ಕೆಲಸಕ್ಕೆ ಬಾರದಿರುವುದನ್ನು ಪ್ರಶ್ನಿಸಿ ಜಾತಿ ನಿಂದನೆ ಮಾಡಿದ್ದಾರೆಂದು ಆರೋಪಿಸಿ ಒಳಮೊಗ್ರು ಗ್ರಾಮದ ಕೂಲಿ ಕೆಲಸದಾಳುವೊಬ್ಬರು ನೀಡಿದ ದೂರಿನಂತೆ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.
ಒಳಮೊಗ್ರು ಗ್ರಾಮದ ನಿವಾಸಿ ಪಿ.ಎಮ್ ಸುಂದರ (40ವ.) ದೂರು ನೀಡಿದವರು. ಅವರು ಅರುಣ ಕುಮಾರ್ ರೈ ಎಂಬವರ ಮನೆಗೆ ಕೆಲಸಕ್ಕೆ ಹೋಗುತ್ತಿದ್ದು ಸೆ.15ರಂದು ಅರುಣ ಕುಮಾರ್ ರೈ ರವರು ಸೂಚಿಸಿದ ಕೆಲಸ ಮಾಡುತ್ತಿದ್ದಾಗ, ಅಲ್ಲಿಗೆ ಬಂದ ಆಶಾ ಶಂಕರ ಭಂಡಾರಿ ಎಂಬವರು ಸುಂದರ ಅವರನ್ನು ನಮ್ಮಲ್ಲಿ ಕೆಲಸಕ್ಕೆ ಬಾರದಿರುವ ಬಗ್ಗೆ ತಕರಾರು ತೆಗೆದು, ಜಾತಿ ನಿಂದನೆ ಮಾಡಿ ಅವಾಚ್ಯ ಶಬ್ಧಗಳಿಂದ ಬೈದಿರುತ್ತಾರೆ ಎಂಬುದಾಗಿ ಆರೋಪಿಸಲಾಗಿದೆ. ಸುಂದರ ಅವರು ನೀಡಿದ ದೂರಿನಂತೆ ಪುತ್ತೂರು ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ

LEAVE A REPLY

Please enter your comment!
Please enter your name here