ಪುಣಚ:ʼನನ್ನ ಮಣ್ಣು ನನ್ನ ದೇಶʼ ಅಭಿಯಾನ – ಮೃತ್ತಿಕೆ ಸಂಗ್ರಹ

0

ಪುಣಚ: ʼನನ್ನ ಮಣ್ಣು ನನ್ನ ದೇಶʼ ಅಭಿಯಾನದ ಅಂಗವಾಗಿ ಸೆ. 23ರಂದು ಪುಣಚ ಶಕ್ತಿ ಕೇಂದ್ರದ ಅಧಿದೇವತೆ ಮಹಿಷಮರ್ದಿನಿ ದೇವಸ್ಥಾನದ ಪವಿತ್ರತಾಣದಿಂದ ಕ್ಷೇತ್ರದ ಪ್ರಧಾನ ಅರ್ಚಕರಾದ ಕೃಷ್ಣ ಬನ್ನಿಂತಾಯರವರು ಮೃತ್ತಿಕೆಯನ್ನು ಸಂಗ್ರಹಿಸಿ ಪುಣಚ ಗ್ರಾ.ಪಂ. ಅಧ್ಯಕ್ಷೆ ಬೇಬಿಯವರಿಗೆ ನೀಡಿದರು.
ಈ ಸಂದರ್ಭದಲ್ಲಿ ಪಂಚಾಯತ್ ಉಪಾಧ್ಯಕ್ಷ ಮಹೇಶ್ ಶೆಟ್ಟಿ ಬೈಲುಗುತ್ತು, ಪುಣಚ ಮಹಾಶಕ್ತೀ ಕೇಂದ್ರ ಕಾರ್ಯದರ್ಶಿ ದಯಾನಂದ ಶೆಟ್ಟಿ, ಸದಸ್ಯರಾದ ಹರೀಶ್ ಪುಣಚ, ತೀರ್ಥರಾಮ್, ಅಶೋಕ್ ಮೂಡಂಬೈಲು, ಮಾಜಿ ಅಧ್ಯಕ್ಷ ರಾಮಕೃಷ್ಣ ಮೂಡಂಬೈಲು, ವ್ಯಾಪಾರ ಪ್ರಕೋಷ್ಟ ಸಂಚಾಲಕರಾದ ಪ್ರೀತಂ ಪೂಂಜ, ಶಕ್ತಿ ಕೇಂದ್ರ ಪ್ರಮುಖರಾದ ಹರೀಶ್ ಭಟ್, ಉದಯಭಾಸ್ಕರ, ಹಾಲು ಪ್ರಕೋಷ್ಟದ ಸಹ ಸಂಚಾಲಕ ಗುರುವಪ್ಪ ಪೂಜಾರಿ, ಬೂತ್ ಅಧ್ಯಕ್ಷರಾದ ಹರೀಶ್ ಕುಲಾಲ್, ಮಂಜುನಾಥ್ ರೈ, ಗ್ರಾಮ ವಿಕಾಸ ಪ್ರಮುಖರಾದ ಜಗದೀಶ್ ದಲ್ಕಜೆ, ಮೊದಲಾದವರು ಉಪಸ್ಥಿತರಿದ್ದರು.‌

LEAVE A REPLY

Please enter your comment!
Please enter your name here