ಕೆಪಿಎಸ್ ಕೆಯ್ಯೂರಿನಲ್ಲಿ ತಾಲೂಕು ಮಟ್ಟದ ಪ್ರತಿಭಾ ಕಾರಂಜಿ ಕಲಾಸಂಗಮ-2023-24ರ ಆಮಂತ್ರಣ ಪತ್ರಿಕೆ ಬಿಡುಗಡೆ

0

ಕೆಯ್ಯೂರು: ದ.ಕ.ಜಿಲ್ಲಾ ಪಂಚಾಯತ್, ಶಾಲಾ ಶಿಕ್ಷಣ ಇಲಾಖೆ, ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಛೇರಿ ಪುತ್ತೂರು, ಮತ್ತು ಕೆಪಿಎಸ್ ಕೆಯ್ಯೂರು ಇವರ ಜಂಟಿ ಆಶ್ರಯದಲ್ಲಿ ಪುತ್ತೂರು ತಾಲೂಕು ಮಟ್ಟದ ಪ್ರತಿಭಾ ಕಾರಂಜಿ ಕಲಾಸಂಗಮ- 2023-24ರ ಆಮಂತ್ರಣ ಪತ್ರಿಕೆಯನ್ನು ಕಲಾ ಸಂಗಮದ ಸ್ವಾಗತ ಸಮಿತಿ ಅಧ್ಯಕ್ಷ ಎಸ್.ಬಿ.ಜಯರಾಮ ರೈ ಬಳಜ್ಜ, ಬಿಡುಗಡೆಗೊಳಿಸಿದರು. ಈ ಸಂದರ್ಭದಲ್ಲಿ ಕೆಪಿಎಸ್ ಕೆಯ್ಯೂರು ಕಾರ್ಯಧ್ಯಕ್ಷ ಎ.ಕೆ.ಜಯರಾಮ ರೈ ಕೆಯ್ಯೂರು, ಕೆಪಿಎಸ್ ಕೆಯ್ಯೂರು ಪದವೀಧರೇತರ ಮುಖ್ಯ ಗುರು ಬಾಬು.ಎಂ, ಕೆಪಿಎಸ್ ಕೆಯ್ಯೂರು ಪ್ರಾಂಶುಪಾಲ ಇಸ್ಮಾಯಿಲ್ ಪಿ, ಸಮಿತಿ ಸದಸ್ಯರಾದ ಜಯಂತ ಪೂಜಾರಿ ಕೆಂಗುಡೇಲು, ಹನೀಪ್ ಕೆ.ಎಂ ಕೆಯ್ಯೂರು, ಅಬ್ದುಲ್ ರಝಕ್ ಕೆಯ್ಯೂರು, ಅಬ್ದುಲ್ ಖಾದರ್ ಮೇರ್ಲ, ಅಶೋಕ್ ರೈ ದೇರ್ಲ, ಶಿವಶ್ರೀ ರಂಜನ್ ರೈ ದೇರ್ಲ, ಚಂದ್ರಶೇಖರ ಪೂಜಾರಿ ಕಣಿಯಾರು, ಉದಯ ಕೆಂಗುಡೇಲು, ಹಸೈನಾರ್ ಕೆಯ್ಯೂರು, ಧರಣಿ ಸಿ.ಬಿ, ಯಶಸ್ವಿನಿ, ಸುಶೀಲ ಕೆಯ್ಯೂರು, ಸುಜಯ, ಶಾಹಿನಾ, ಮಮತಾ ಪೆರ್ಲಂಪಾಡಿ, ಉಪಸ್ಥಿತಿಯಿದ್ದರು. ಕೆಪಿಎಸ್ ಕೆಯ್ಯೂರು ಉಪಪ್ರಾಂಶುಪಾಲ ವಿನೋದ್ ಕುಮಾರ್ ಕೆ.ಎಸ್ ಸ್ವಾಗತಿಸಿ, ವಂದಿಸಿದರು.

LEAVE A REPLY

Please enter your comment!
Please enter your name here