ಕೊಡಿಪ್ಪಾಡಿ ಶ್ರೀಜನಾರ್ದನ ದೇವಸ್ಥಾನದ ವಿವಿಧ ಸಮಿತಿ ಪದಾಧಿಕಾರಿಗಳಿಂದ ನೂತನ ಬ್ರಹ್ಮರಥದ ಕೆಲಸ ವೀಕ್ಷಣೆ

0

ಪುತ್ತೂರು: ಕೊಡಿಪ್ಪಾಡಿ ಶ್ರೀ ಜನಾರ್ದನ ಕ್ಷೇತ್ರಕ್ಕೆ ನೂತನವಾಗಿ ನಿರ್ಮಾಣವಾಗುತ್ತಿರುವ ಬ್ರಹ್ಮರಥದ ಕೆಲಸವನ್ನು ಕ್ಷೇತ್ರದ ವಿವಿಧ ಸಮಿತಿಗಳ ಪದಾಧಿಕಾರಿಗಳು ವಿಕ್ಷಣೆ ಮಾಡಿದರು.
ಮೂಡಬಿದಿರೆಯಲ್ಲಿ ಬ್ರಹ್ಮರಥದ ಶಿಲ್ಪಿ ಹರೀಶ್ ಆಚಾರ್ಯ ಮೂಡಬಿದಿರೆರವರ ನೇತೃತ್ವದಲ್ಲಿ ಕೆಲಸಕಾರ್ಯಗಳು ಭರದಿಂದ ಸಾಗುತ್ತಿದ್ದು, ಅಲ್ಲಿಗೆ ತೆರಳಿದ ಸಮಿತಿ ಪದಾಧಿಕಾರಿಗಳು ರಥದ ಕೆಲಸವನ್ನು ವೀಕ್ಷಿಸಿ ಶಿಲ್ಪಿಯವರಿಂದ ಮಾಹಿತಿ ಪಡೆದರು.

ಈ ಸಂದರ್ಭದಲ್ಲಿ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷರಾದ ಜನಾರ್ಧನ ಎರ್ಕಡಿತ್ತಾಯ, ಸದಸ್ಯರಾದ ಸುಧೀರ್ ಪ್ರಸಾದ್, ಅರ್ಚಕರಾದ ಮುರಳೀಧರ ಬಡಿಕಿಲ್ಲಾಯ, ಅಭಿವೃದ್ಧಿ ಸಮಿತಿ ಪ್ರಧಾನ ಕಾರ್ಯದರ್ಶಿ ಮನೋಹರ ನಾಯ್ಕ್ ಕೊಳಕ್ಕೆಮಾರ್, ಬ್ರಹ್ಮಕಲಶೋತ್ಸವ ಸಮಿತಿ ಪ್ರಧಾನ ಕಾರ್ಯದರ್ಶಿ ಕೃಷ್ಣರಾಜ ಎರ್ಕಡಿತ್ತಾಯ ಮೊದಲಾದವರು ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here