ಕೈ ತುತ್ತು ನೀಡಿದ್ದ ಭಾಮಿ ರಾಧಾ ಶೆಣೈ ಅಂತಿಮ ದರ್ಶನ ಪಡೆಯಲು ಡಿ.ವಿ.ಎಸ್ ಪುತ್ತೂರಿಗೆ

0

ಪುತ್ತೂರು: ಪುಡಾ ನಿಕಟಪೂರ್ವ ಅಧ್ಯಕ್ಷ ಭಾಮಿ ಅಶೋಕ್ ಶೆಣೈ ಅವರ ತಾಯಿ ಕೆಮ್ಮಾಯಿ ನಿವಾಸಿ ಭಾಮಿ ರಾಧಾ ವಾಸುದೇವ ಶೆಣೈ(92) ಅವರು ಡಿ.16 ರಂದು ಸ್ವಗೃಹದಲ್ಲಿ ನಿಧನರಾಗಿದ್ದು, ಅಂತಿಮ ದರ್ಶನ ಪಡೆಯಲು ಮಾಜಿ ಮುಖ್ಯಮಂತ್ರಿ ಡಿ.ವಿ.ಸದಾನಂದ ಗೌಡ ಪುತ್ತೂರಿಗೆ ಆಗಮಿಸಲಿದ್ದಾರೆ.

ಡಿ.ವಿ.ಸದಾನಂದ ಗೌಡ ಅವರು ತಮ್ಮ ಆರಂಭದ ರಾಜಕೀಯ ಚಟುವಟಿಕೆಗಳ ಸಂದರ್ಭದಲ್ಲಿ ಪುತ್ತೂರು ಕೆಮ್ಮಾಯಿ ಭಾಮಿ ಅಶೋಕ್ ಶೆಣೈ ಅವರ ಮನೆಯಲ್ಲೇ ತಂಗಿದ್ದರು. ಈ ಸಂದರ್ಭ ರಾಧಾ ಶೆಣೈ ಅವರು ಡಿ.ವಿ.ಸದಾನಂದ ಗೌಡ ಅವರಿಗೆ ಕೈ ತುತ್ತು ನೀಡುತ್ತಿದ್ದರು ಎನ್ನಲಾಗಿದೆ. ಇದನ್ನು ಸ್ಮರಿಸಿಕೊಂಡಿರುವ ಡಿ.ವಿ.ಸದಾನಂದ ಗೌಡ ಮುಖ್ಯಮಂತ್ರಿಯಾದ ಸಂದರ್ಭದಲ್ಲಿ (2011ರ ಆಗಸ್ಟ್) ಪುತ್ತೂರಿಗೆ ಆಗಮಿಸಿ ಅಶೋಕ್ ಶೆಣೈ ಅವರ ಸಹೋದರರ ಮನೆಗೆ ತೆರಳಿ ಅಲ್ಲಿ ರಾಧಾ ಶೆಣೈ ಅವರ ಆಶೀರ್ವಾದ ಪಡೆದು, ತಮಗಿಷ್ಟವಾದ ಪತ್ರೊಡೆಯನ್ನು ರಾಧಾ ಶೆಣೈ ಅವರ ಕೈ ತುತ್ತುನಿಂದ ಸವಿದಿದ್ದರು. ಇಂದು ಬೆಳಿಗ್ಗೆ ರಾಧಾ ಶೆಣೈ ಅವರು ಇಹಲೋಕ ತ್ಯಜಿಸಿದ್ದು, ಮಾಹಿತಿ ಪಡೆದ ಡಿ ವಿ ಪುತ್ತೂರಿನತ್ತ ಪ್ರಯಾಣ ಬೆಳೆಸಿದ್ದಾರೆ. ರಾತ್ರಿ 8 ಗಂಟೆ ವೇಳೆಗೆ ಡಿ ವಿ ಪುತ್ತೂರಿಗೆ ತಲುಪಲಿದ್ದಾರೆ.

LEAVE A REPLY

Please enter your comment!
Please enter your name here