ಕುರಿಯ ಏಳ್ನಾಡುಗುತ್ತು ತರವಾಡು ಮನೆಯಲ್ಲಿ ಸಂಕ್ರಮಣ ಪೂಜೆ ಹಾಗೂ ಅಭಿನಂದನಾ ಕಾರ್ಯಕ್ರಮ

0

ಪುತ್ತೂರು: ಕುರಿಯ ಏಳ್ನಾಡುಗುತ್ತು‌ ತರವಾಡು ಮನೆಯಲ್ಲಿ ದ. 16 ರಂದು ಶ್ರೀಮತಿ ಮತ್ತು ಶ್ರೀ ಕೆ ಎಮ್ ಮೋಹನ್ ರೈ ಹಾಗೂ ಮಾಡಾವು ಕುಟುಂಬಸ್ಥರಿಂದ ಸಂಕ್ರಮಣ ಪೂಜೆ ನಡೆಯಿತು. ಈ ಸಂದರ್ಭದಲ್ಲಿ ಕರ್ನಾಟಕ ರಾಜ್ಯ ಧಾರ್ಮಿಕ ಪರಿಷತ್ ಸದಸ್ಯರಾಗಿ ಆಯ್ಕೆಯಾದ ಮಲ್ಲಿಕಾ ಪ್ರಶಾಂತ್ ಪಕ್ಕಳ ಮಲಾರಬೀಡು ರವರನ್ನು ಏಳ್ನಾಡುಗುತ್ತು ಕುಟುಂಬದ ವತಿಯಿಂದ ಅಭಿನಂದಿಸಲಾಯಿತು.

ಕೆ ಎಮ್ ಮೋಹನ್ ರೈ ಮಾಡಾವು ರವರು ಶಾಲು ಹೊದಿಸಿ ಅಭಿನಂದಿಸಿದರು. ರಾಧಾಕೃಷ್ಣ ರೈ ಕುರಿಯ ಏಳ್ನಾಡುಗುತ್ತು ಫಲಪುಷ್ಪ ನೀಡಿ ಅಭಿನಂದಿಸಿದರು .ಈ ಸಂದರ್ಭದಲ್ಲಿ ಪುತ್ತೂರು ತಾಲೂಕು ಅಕ್ರಮ ಸಕ್ರಮ ಸಮಿತಿಯ ಸದಸ್ಯರಾಗಿ ಆಯ್ಕೆಯಾಗಿರುವ ರೂಪ ರೇಖಾ ಆಳ್ವ ಮಾಡಾವು ರವರನ್ನು ಕೂಡ ಹೂವು ಗುಚ್ಛ ನೀಡಿ, ಶಾಲು ಹಾಕಿ ಅಭಿನಂದಿಸಲಾಯಿತು .ಶ್ರೀ ಹರ್ಷ ಕುಮಾರ್ ರೈ ಮಾಡಾವು ಕಾರ್ಯಕ್ರಮ ನಿರೂಪಿಸಿದರು. ಕುರಿಯ ಮಾಡಾವು ನಂಜೆ ಸೇರಿದಂತೆ ಏಳ್ನಾಡು ಗುತ್ತು ಕುಟುಂಬದ ಸದಸ್ಯರು ಹಾಗೂ ಬಂಧುಮಿತ್ರರು ಉಪಸ್ಥಿತರಿದ್ದು ಶುಭ ಹಾರೈಸಿದರು.

LEAVE A REPLY

Please enter your comment!
Please enter your name here