ಡಿ.24: ನೆಲ್ಯಾಡಿ ಕೋಲ್ಪೆ ಮಸೀದಿಯಲ್ಲಿ ನೂರೇ ಅಜ್ಮೀರ್ ಆಧ್ಯಾತ್ಮಿಕ ಸಂಗಮ

0

ನೆಲ್ಯಾಡಿ: ಬದ್ರಿಯಾ ಜುಮಾ ಮಸ್ಜೀದ್ ಕೋಲ್ಪೆ ಹಾಗೂ ಸೈಯ್ಯದ್ ಮಲ್ಹರ್ ವಲಿಯುಲ್ಲಾಹಿ ದರ್ಗಾಶರೀಫ್ ಕೋಲ್ಪೆ ಇದರ ಆಶ್ರಯದಲ್ಲಿ ‘ನೂರೇ ಅಜ್ಮೀರ್ ಆಧ್ಯಾತ್ಮಿಕ ಸಂಗಮ’ ಡಿ.24ರಂದು ಸಂಜೆ 7.30ಕ್ಕೆ ನೆಲ್ಯಾಡಿ ಕೋಲ್ಪೆ ಬದ್ರಿಯಾ ಜುಮಾ ಮಸೀದಿ ವಠಾರದಲ್ಲಿ ನಡೆಯಲಿದೆ.


ಸೈಯ್ಯದ್ ಸಫ್ವಾನ್ ತಂಙಳ್ ಎಝುಮಲ ಕೇರಳ ಅವರು ದು:ವಾ ನೇತೃತ್ವ ವಹಿಸಲಿದ್ದಾರೆ. ವಲಿಯುದ್ದೀನ್ ಫೈಝಿ ವಾಯಕ್ಕಾಡ್ ಕೇರಳ ಅವರು ನೂರೇ ಅಜ್ಮೀರ್ ನೇತೃತ್ವ ವಹಿಸಲಿದ್ದಾರೆ. ಕೋಲ್ಪೆ ಮುದರ್ರಿಸ್ ಮುಹಮ್ಮದ್ ಶರೀಫ್ ದಾರಿಮಿ ಅಲ್ ಹೈತಮಿ ಉದ್ಘಾಟಿಸಲಿದ್ದಾರೆ. ಕೋಲ್ಪೆ ಬಿಜೆಎಂ ಅಧ್ಯಕ್ಷರಾದ ಕೆ.ಕೆ.ಅಬೂಬಕ್ಕರ್ ಅಧ್ಯಕ್ಷತೆ ವಹಿಸಲಿದ್ದಾರೆ. ಕಾರ್ಯಕ್ರಮದಲ್ಲಿ ಹಲವು ಗಣ್ಯರು ಅತಿಥಿಗಳಾಗಿ ಭಾಗವಹಿಸಲಿದ್ದಾರೆ ಎಂದು ಪ್ರಕಟಣೆ ತಿಳಿಸಿದೆ.

LEAVE A REPLY

Please enter your comment!
Please enter your name here