ಕೋಲ್ಪೆ: ನೂರೇ ಅಜ್ಮೀರ್ ಆಧ್ಯಾತ್ಮಿಕ ಸಂಗಮ

0

ನೆಲ್ಯಾಡಿ: ಬದ್ರಿಯಾ ಜುಮಾ ಮಸ್ಜಿದ್ ಕೋಲ್ಪೆ, ಸೈಯ್ಯದ್ ಮಲ್ಹರ್ ವಲಿಯುಲ್ಲಾಹಿ ದರ್ಗಾಶರೀಫ್ ಕೋಲ್ಪೆ ಇದರ ಆಶ್ರಯದಲ್ಲಿ ನೂರೇ ಅಜ್ಮೀರ್ ಆಧ್ಯಾತ್ಮಿಕ ಸಂಗಮ ಡಿ.24ರಂದು ರಾತ್ರಿ ಕೋಲ್ಪೆ ಬದ್ರಿಯಾ ಜುಮಾ ಮಸೀದಿ ವಠಾರದಲ್ಲಿ ನಡೆಯಿತು.


ಸೈಯ್ಯದ್ ಸಫ್ವಾನ್ ತಂಙಳ್ ಎಝಮಲ ಕೇರಳ ಅವರು ದು:ವಾ ನೇತೃತ್ವ ವಹಿಸಿದ್ದರು. ವಲಿಯುದ್ದೀನ್ ಫೈಝಿ ವಾಯಕ್ಕಾಡ್ ಕೇರಳ ಅವರು ನೂರೇ ಅಜ್ಮೀರ್‌ಗೆ ನೇತೃತ್ವ ವಹಿಸಿದ್ದರು. ಕೋಲ್ಪೆ ಮುದರ್ರಿಸ್ ಮುಹಮ್ಮದ್ ಶರೀಫ್ ದಾರಿಮಿ ಅಲ್‌ಹೈತಮಿ ಅವರು ಉದ್ಘಾಟಿಸಿದರು. ಕೋಲ್ಪೆ ಬಿಜೆಎಂ ಅಧ್ಯಕ್ಷ ಕೆ.ಕೆ.ಅಬೂಬಕ್ಕರ್ ಅಧ್ಯಕ್ಷತೆ ವಹಿಸಿದ್ದರು.

ಕೋಲ್ಪೆ ಬಿ.ಜೆ.ಎಂ. ಗೌರವಾಧ್ಯಕ್ಷ ಬಿ.ಎಸ್.ಬಾವಾ ತಂಙಳ್, ಎಸ್‌ಕೆಎಸ್‌ಎಸ್‌ಎಫ್ ಟ್ರೆಂಡ್ ರಾಜ್ಯ ತರಬೇತುದಾರ ಇಕ್ಬಾಲ್ ಬಾಳಿಲ, ಕೆ.ಆರ್.ಹುಸೈನ್ ದಾರಿಮಿ ರೆಂಜಿಲಾಡಿ, ನೆಲ್ಯಾಡಿಯ ಉದ್ಯಮಿ ರಫೀಕ್ ಸೀಗಲ್, ದುಬೈ ಉದ್ಯಮಿ ಹಮೀದ್ ಶಿರ್ಲಾಲ್, ಶಿಕ್ಷಣ ತಜ್ಞ ರಫೀಕ್ ಮಾಸ್ಟರ್, ಸಕಲೇಶಪುರದ ಉದ್ಯಮಿ ಶಾಫಿ ಆನೆಮಹಲ್ ಎ.ಬಿ.ಎಫ್., ಮಂಗಳೂರು ಶಹಲ್ ಎಂಟರ್‌ಪ್ರೈಸಸ್‌ನ ಇಕ್ಬಾಲ್ ಮಂಗಳೂರು, ಗೋಳಿತ್ತೊಟ್ಟು ಆರ್‌ಜೆಎಂ ಅಧ್ಯಕ್ಷ ಆರಿಫ್ ಹೆಚ್., ಹೊಸಮಜಲು ಎ.ಎಂ.ಜೆ. ಖತೀಬರಾದ ಅಬ್ದುಲ್ ಮಜೀದ್ ಸಖಾಫಿ ಮಲ್ಲಿ, ನೆಲ್ಯಾಡಿ ಜೆ.ಎಂ.ಖತೀಬರಾದ ಸೌಖತ್ ಆಲಿ ಅಲ್ ಅಮಾನಿ, ಗೋಳಿತ್ತೊಟ್ಟು ಜೆ.ಎಂ.ಖತೀಬರಾದ ಹನೀಫ್ ದಾರಿಮಿ, ಕೋಲ್ಪೆ ನೂರಾನಿಯ ಮದ್ರಸ ಸದರ್ ಮುಅಲ್ಲಿಂ ಯೂಸುಫ್ ಮುಸ್ಲಿಯಾರ್, ಉಪ್ಪಿನಂಗಡಿ ಮದರಸ ಮ್ಯಾನೇಜೆಮೆಂಟ್ ಅಧ್ಯಕ್ಷ ಅಬ್ದುಲ್ ರಹಿಮಾನ್ ಹಾಜಿ, ಕೊಕ್ಕಡ ಜೆ.ಎಂ.ಅಧ್ಯಕ್ಷ ಎಂ.ಎಸ್.ಹೈದರ್ ಕೊಕ್ಕಡ, ನೆಲ್ಯಾಡಿ ಬಿಜೆಎಂ ಅಧ್ಯಕ್ಷ ನ್ಯಾಯವಾದಿ ಇಸ್ಮಾಯಿಲ್ ನೆಲ್ಯಾಡಿ, ಮಲ್ಲಿಗೆಮಜಲು ಜುಮಾ ಮಸ್ಜಿದ್ ಅಧ್ಯಕ್ಷ ಉಮ್ಮರ್ ಬೈಲಂಗಡಿ, ಕರಾಯ ಬಿಜೆಎಂ ಕೋಶಾಧಿಕಾರಿ ಅಬ್ದುಲ್ ಖಾದರ್ ಕರಾಯ,ಕೊಕ್ಕಡ ಉದ್ಯಮಿ ಅಶ್ರಫ್, ಇಸ್ಮಾಯಿಲ್ ತಂಙಳ್ ಉಪ್ಪಿನಂಗಡಿ, ಹೊಸಮಜಲು ಎ.ಎಂ.ಜೆ. ಅಧ್ಯಕ್ಷ ಪಿ.ಎ.ಕೆ.ಅಬ್ದುಲ್ ರಹಿಮಾನ್, ನೆಲ್ಯಾಡಿ ಪ್ರಗತಿ ಸುಪಾರಿಯ ಉಬೈದ್ ಪರ್ಲಡ್ಕ, ಉದ್ಯಮಿ ಅಮೀರ್ ಜಾನ್ ಸಾಹೇಬ್ ಹೊಸಮಜಲು, ಸಿ.ಕೆ.ಅಬ್ದುಲ್ ಅಝೀಝ್ ದುಬೈ, ಕೊಚ್ಚಿಲ ಅನ್ಸಾರುಲ್ ಮುಸ್ಲಿಮೀನ್ ಯಂಗ್‌ಮೆನ್ಸ್ ಅಧ್ಯಕ್ಷ ಜಲೀಲ್ ಹೆಚ್., ಎಸ್‌ಕೆಎಸ್‌ಎಸ್‌ಎಫ್ ಕೋಲ್ಪೆ ಯುನಿಟ್ ಅಧ್ಯಕ್ಷ ಸಲೀಂ ಎಮ್.ಕೆ, ಉದ್ಯಮಿ ಹನೀಫ್ ಕುಂತೂರು ಮತ್ತಿತರರು ವೇದಿಕೆಯಲ್ಲಿ ಉಪಸ್ಥಿತರಿದ್ದರು.


ಸೌದಿ ಅರೇಬಿಯಾ ಪ್ಲಾಂಟ್ ಸೊಲ್ಯೊಷನ್‌ನ ಅಬ್ದುಲ್ ಹಮೀದ್ ಅಸ್ಕಾಫ್ ಪ್ರಾಸ್ತಾವಿಕವಾಗಿ ಮಾತನಾಡಿದರು. ಹಾಜಿ ಕೆ.ಕೆ.ಇಸ್ಮಾಯಿಲ್ ಸ್ವಾಗತಿಸಿದರು. ಕೆ.ಎಸ್.ನಾಸೀರ್ ಸಮರಗುಂಡಿ ವಂದಿಸಿದರು. ಆಸೀಫ್ ಕೆ.ಕೆ., ಆರೀಫ್ ಕೌಸರಿ, ಶರೀಫ್ ಕೆ.ಎಸ್. ಕಾರ್ಯಕ್ರಮ ನಿರೂಪಿಸಿದರು.

LEAVE A REPLY

Please enter your comment!
Please enter your name here