ನೆಲ್ಲಿಕಟ್ಟೆ ಸ.ಮಾ.ಹಿ.ಪ್ರಾ ಶಾಲಾ ವಾರ್ಷಿಕೋತ್ಸವ

0

ಪುತ್ತೂರು: ಸ.ಮಾ.ಹಿ.ಪ್ರಾ.ಶಾಲೆ ಪುತ್ತೂರು (ನೆಲ್ಲಿಕಟ್ಟೆ) ಇಲ್ಲಿ ಡಿ.29 ರಂದು ಪ್ರತಿಭಾ ಸಿಂಚನ ಶಾಲಾ ವಾರ್ಷಿಕೋತ್ಸವ ನಡೆಯಿತು. ಸಭಾ ಕಾರ‍್ಯಕ್ರಮದಲ್ಲಿ ವಸುಧಾ ಅಧ್ಯಕ್ಷತೆ ವಹಿಸಿದ್ದರು. ಮುಖ್ಯ ಅತಿಥಿಗಳಾಗಿ ಸಿ.ಆರ್.ಪಿ ಶಶಿಕಲಾ, ಶಾಲೆಯನ್ನು ದತ್ತು ಸ್ವೀಕರಿಸಿದ ವೇದಮೂರ್ತಿ ವೆಂಕಟೇಶ್ ಭಟ್, ಶಾಲೆಯ ಹಳೆ ವಿದ್ಯಾರ್ಥಿ ಉಲ್ಲಾಸ್ ಪೈ, ನಯನ ರೈ, ನಿವೃತ್ತ ಶಿಕ್ಷಕಿ ಮೀನಾಕ್ಷಿ ಹಾಗೂ ದಿನೇಶ್ ಕಾಮತ್ ಉಪಸ್ಥಿತರಿದ್ದರು. ಮುಖ್ಯ ಶಿಕ್ಷಕಿ ಯಶೋಧಾ ವೈ ಸ್ವಾಗತಿಸಿ, ಅತಿಥಿ ಶಿಕ್ಷಕಿ ನಯನ ವರದಿ ವಾಚಿಸಿದರು. ಕಾರ‍್ಯಕ್ರಮದ ನಿರೂಪಣೆಯಲ್ಲಿ ಅತಿಥಿ ಶಿಕ್ಷಕರು ಹಾಗೂ ಗೌರವ ಶಿಕ್ಷಕರಾದ ಸಂದ್ಯಾ, ವಿನಯ, ವೇದಾವತಿಯವರು ಸಹಕರಿಸಿದರು. ಶಿಕ್ಷಕಿ ರಾಜೇಶ್ವರಿ ವಂದಿಸಿದರು. ಅಂಗನವಾಡಿ, ಎಲ್ ಕೆಜಿ, ಯುಕೆಜಿ ಶಾಲಾ ಮಕ್ಕಳಿಂದ ಸಾಂಸ್ಕೃತಿಕ ಕಾರ‍್ಯಕ್ರಮ ನಡೆಯಿತು.

LEAVE A REPLY

Please enter your comment!
Please enter your name here