ದುಗ್ಗಲ ಕೋರಿಕ್ಕಾರು ಭಾಗದಲ್ಲಿ ಮತ್ತೆ ಪ್ರತ್ಯಕ್ಷಗೊಂಡ ಕಾಡಾನೆ – ಇಂದು ರಾತ್ರಿ ಕಾರ್ಯಾಚರಣೆ

0

ಪುತ್ತೂರು: ಕೋರಿಕ್ಕಾರು ದುಗ್ಗಲ ಭಾಗದ ಜನರು ಜಾಗೃತರಾಗಿರುವಂತೆ ಕೊಳ್ತಿಗೆ ಗ್ರಾ.ಪಂ.ಉಪಾಧ್ಯಕ್ಷ ಪ್ರಮೋದ್‌ ಕೆ ಎಸ್‌ ಹೇಳಿದ್ದಾರೆ.

ಇಂದು ಬೆಳಿಗ್ಗೆ ಕೋರಿಕ್ಕಾರು ಗಣೇಶ್‌ ಭಂಡಾರಿ ಎಂಬವರ ಜಮೀನಿನ ಭಾಗದಲ್ಲಿ ಕಾಡಾನೆ ಪ್ರತ್ಯಕ್ಷವಾಗಿದೆ. ಅವಿನಾಶ್‌, ಮತ್ತು ಒಂದಿಬ್ಬರು ಸ್ಥಳೀರೊಂದಿಗೆ ಕಾಡಾನೆಯನ್ನು ಕಣ್ಣಾರೆ ನೋಡಿರುವುದಾಗಿ ಪ್ರಮೋದ್‌ ಕೆ ಎಸ್‌ ಹೇಳಿದ್ದಾರೆ. ಈ ಭಾಗದಲ್ಲಿ ಕಾಡಾನೆ ಇರುವುದು ದೃಢಪಟ್ಟಿದ್ದು ಇಂದು ಕಾರ್ಯಾಚರಣೆ ಮೂಲಕ ಕಾಡಾನೆಯನ್ನು ಹಿಮ್ಮೆಟ್ಟಿಸುವ ಕಾರ್ಯ ಮಾಡಲಿದ್ದೇವೆ. ಕಾಡಾನೆ ಕೋರಿಕ್ಕಾರು ಮೇಲಿನ ಭಾಗದಿಂದ ಕೆಳಕ್ಕೆ ಬರುವ ಸಾಧ್ಯತೆಯಿದ್ದು, ಸ್ಥಳೀಯರು ಜಾತರಾಗಿರುವಂತೆ ಕೊಳ್ತಿಗೆ ಗ್ರಾ.ಪಂ ಉಪಾಧ್ಯಕ್ಷ ಪ್ರಮೋದ್‌ ಕೆ ಎಸ್‌ ತಿಳಿಸಿದ್ದಾರೆ.

ವಿಡಿಯೋಗಾಗಿ ಇಲ್ಲಿ ಕ್ಲಿಕ್‌ ಮಾಡಿ

LEAVE A REPLY

Please enter your comment!
Please enter your name here