![](https://puttur.suddinews.com/wp-content/uploads/2024/06/Imperial_Manjunatheshwara_-GL-Acharya.gif)
ಪುತ್ತೂರು: ಪುತ್ತಿಲ ಪರಿವಾರ ಸೇವಾ ಟ್ರಸ್ಟ್ ಪುತ್ತೂರು ಮತ್ತು ಊರಿನವರ ಸಹಾಯ ಹಸ್ತದಿಂದ ಅನಾರೋಗ್ಯದಲ್ಲಿದ ಸುಂದರ ನಾಯ್ಕ್ ಬಿ.ಕೆ ಅವರಿಗೆ ಸುಮಾರು ರೂ.37,000 ಆರ್ಥಿಕ ಧನ ಸಹಾಯವನ್ನು ನೀಡಲಾಯಿತು. ಅರುಣ್ ಕುಮಾರ್ ಪುತ್ತಿಲ ಅವರ ನೇತೃತ್ವದಲ್ಲಿ ಸುಂದರ ನಾಯ್ಕ ಅವರ ಮನೆಗೆ ಭೇಟಿ ನೀಡಿದ ನಿಯೋಗ ಅರೋಗ್ಯ ವಿಚಾರಿಸಿ ಧನ ಸಹಾಯವನ್ನು ಹಸ್ತಾಂತರಿಸಿದರು.
![](https://puttur.suddinews.com/wp-content/uploads/2024/05/06b020c8-887f-403e-9eef-b32036919a7d.jpg)
ಈ ಸಂದರ್ಭದಲ್ಲಿ ಮುಂಡೂರು ಹಾಲು ಉತ್ಪಾದಕರ ಸಹಕಾರ ಸಂಘದ ನಿರ್ದೇಶಕ ಅನಿಲ್ ಕುಮಾರ್ ಕಣ್ಣಾರ್ನುಜಿ, ಗ್ರಾಮ ಪಂಚಾಯತ್ ಸದಸ್ಯ ಬಾಲಕೃಷ್ಣ ಪೂಜಾರಿ ಕುರೆಮಜಲು, ಶ್ರೀರಾಮ ಗೆಳೆಯರ ಬಳಗದ ಅಧ್ಯಕ್ಷ ಪ್ರಸಾದ್ ಬಿಕೆ, ಮೋಹನ್ ನಾಯ್ಕ ಕೇದಗೆದಡಿ, ಹರೀಶ ಬಿಕೆ, ರುಕ್ಮಯ ಕೇದಗೆದಡಿ ಮತ್ತು ಧನಂಜಯ ಕಲ್ಲಮ ಉಪಸ್ಥಿತರಿದ್ದರು.