ಮಹಾಬಲ-ಲಲಿತ ಕಲಾ ಸಭಾದಿಂದ ಕರ್ನಾಟಕ ಶಾಸ್ತ್ರೀಯ ಸಂಗೀತ

0

ಪುತ್ತೂರು: ಮಹಾಬಲ-ಲಲಿತ ಕಲಾ ಸಭಾದ ಆಶ್ರಯದಲ್ಲಿ ಎನ್.ಎಸ್ ಮುರಳೀಧರ ರಾವ್ ಸಂಸ್ಮರಣಾರ್ಥ ಕರ್ನಾಟಕ ಶಾಸ್ತ್ರೀಯ ಸಂಗೀತ ಸೇವಾ ಕಾರ್ಯಕ್ರಮ ಮೇ.19 ರಂದು ಸಂಜೆ ಮಹತೋಭಾರ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದಲ್ಲಿ ಜರಗಿತು.

ಚಿತ್ರ: ಸಂತೋಷ್ ಮೊಟ್ಟೆತ್ತಡ್ಕ

ಕಾರ್ಯಕ್ರಮದಲ್ಲಿ ಗಾಯನವನ್ನು ವಿದುಷಿ ಡಾ.ಸುಕನ್ಯಾ ಪ್ರಭಾಕರ್ ಮೈಸೂರು, ಸಹ ಗಾಯನವನ್ನು ವಿದುಷಿ ಆರ್.ನಿತ್ಯಶ್ರೀ ಮೈಸೂರು ನಡೆಸಿಕೊಟ್ಟರು. ವಯೊಲಿನ್ ನಲ್ಲಿ ವಿದ್ವಾನ್ ಗಣರಾಜ್ ಕಾರ್ಲೆ, ಮೃದಂಗದಲ್ಲಿ ವಿದ್ವಾನ್ ಸುನಾದಕೃಷ್ಣ ಅಮೈರವರು ಸಹಕರಿಸಿದರು. ನೂರಾರು ಸಂಗೀತಾಭಿಮಾನಿಗಳು ಕಾರ್ಯಕ್ರಮದಲ್ಲಿ ಹಾಜರಾಗಿ ಕಲೆಯನ್ನು ಆಸ್ವಾದಿಸಿದರು. ಮಹಾಬಲ-ಲಲಿತ ಕಲಾ ಸಭಾದ ನಿರ್ದೇಶಕ ಡಾ.ಶ್ರೀಪ್ರಕಾಶ್ ಬಿ.ರವರು ಸ್ವಾಗತಿಸಿ, ಕಾರ್ಯಕ್ರಮ ನಿರೂಪಿಸಿದರು. 

LEAVE A REPLY

Please enter your comment!
Please enter your name here