ಆಲಂಕಾರು ಜೆಸಿಐನಿಂದ ಕುಂತೂರು ಆನಂದ ಗೌಡರಿಗೆ ಮೌನ ಸಾಧಕ ಪುರಸ್ಕಾರ

0

ಕಡಬ: ಜೇಸಿಐ ಆಲಂಕಾರು ಘಟಕದ ವತಿಯಿಂದ ಪ್ರತಿ ತಿಂಗಳು ಮೌನಸಾಧಕ ಪುರಸ್ಕಾರ ಎಂಬ ಶೀರ್ಷಿಕೆಯ ಅಡಿಯಲ್ಲಿ ಸ್ಥಳೀಯವಾಗಿ ಸಾಧನೆಗೈದ ಹಲವಾರು ಸಾಧಕರನ್ನು ಗುರುತಿಸಿ ಗೌರವಿಸುತ್ತಾ ಬರಲಾಗುತ್ತಿದ್ದು ಮೇ ತಿಂಗಳ ಮೌನ ಸಾಧಕ ಪುರಸ್ಕಾರವನ್ನು ತೆಂಗಿನಕಾಯಿ, ಅಡಿಕೆ ಕೀಳುವ ಮತ್ತು ಸುಳಿಯುವ ಕೆಲಸ ಮಾಡುತ್ತಿರುವ ಶ್ರಮಜೀವಿ ಕುಂತೂರು ಆನಂದ ಗೌಡರಿಗೆ ನೀಡಿ ಗೌರವಿಸಲಾಯಿತು.

ಕಾರ್ಯಕ್ರಮವು ಆಲಂಕಾರು ಬಾಕಿಲ ನಿವಾಸದಲ್ಲಿ ನಡೆಯಿತು. ಜೆಸಿಐ ಆಲಂಕಾರು ಇದರ ಅಧ್ಯಕ್ಷೆ ಮಮತಾ ಅಂಬರಾಜೆ, ನಿಕಟಪೂರ್ವ ಅಧ್ಯಕ್ಷ ಲಕ್ಷ್ಮೀನಾರಾಯಣ ಅಲೆಪ್ಪಾಡಿ, ವಲಯ 15ರ ತರಬೇತಿ ವಿಭಾಗದ ನಿರ್ದೇಶಕಿ ಹೇಮಲತಾ ಬಾಕಿಲ, ಪೂರ್ವಾಧ್ಯಕ್ಷರಾದ ಪ್ರದೀಪ್ ಬಾಕಿಲ, ಗುರುಕಿರಣ್ ಶೆಟ್ಟಿ, ವಲಯ ತರಬೇತುದಾರ ಚೇತನ್ ಮೊಗ್ರಾಲ್, ಕಾರ್ಯದರ್ಶಿ ಕೃತಿಕಾ ಗುರುಕಿರಣ್ ಶೆಟ್ಟಿ, ಜೂನಿಯರ್ ಜೇಸಿ ಅಧ್ಯಕ್ಷೆ ಧನ್ಯಶ್ರೀ, ಹಿತೈಷಿಗಳಾದ ಕಮಲಾಕ್ಷ ಶೆಟ್ಟಿ ಅಂಬರಾಜೆ, ಸನ್ಮಾನಿತರ ಮನೆಯವರು ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here