ವಾರ್ಡ್-15‌ ಬೊಳುವಾರಿನ ಸಮಸ್ಯೆಗಳನ್ನು ಪರಿಹರಿಸುವಂತೆ ನಗರಸಭಾ ಸದಸ್ಯ ಸಂತೋಷ್ ಮನವಿ

0

ಪುತ್ತೂರು: ವಾರ್ಡ್-15‌ ಬೊಳುವಾರಿನ ಅನೇಕ ಸಮಸ್ಯೆಗಳನ್ನು ಪರಿಹರಿಸುವಂತೆ ಕೋರಿ ಪುತ್ತೂರು ನಗರಸಭೆ ಕಮಿಷನರ್‌ ಅವರಿಗೆ ನಗರಸಭಾ ಸದಸ್ಯ ಕೆ ಸಂತೋಷ್‌ ಕುಮಾರ್‌ ಮನವಿ ಮಾಡಿದ್ದಾರೆ.

ವಾರ್ಡ್-15‌ ಬೊಳುವಾರಿನ ವಿಶ್ವಕರ್ಮ ಸಭಾಭವನಕ್ಕೆ ಹೋಗುವ ರಸ್ತೆಯನ್ನು ಜಲಸಿರಿ ಕಾಮಗಾರಿ ನಡೆಸುವ ವೇಳೆ ಸಂಪೂರ್ಣ ಹಾನಿಯಾಗಿದ್ದು ಈ ರಸ್ತೆಯನ್ನು ಕಾಂಕ್ರೀಟ್ ಕರಣಗೊಳಿಸಿ ಚರಂಡಿಯ ವ್ಯವಸ್ಥೆಯನ್ನು ನಿರ್ಮಿಸುವಂತೆ, ಶೆಲ್ ಪೆಟ್ರೋಲ್ ಪಂಪ್ ಬಳಿಯಿಂದ ನಗರೋತ್ಥಾನದ ವತಿಯಿಂದ ನಿರ್ಮಿಸಿದ ತಡೆಗೋಡೆಗೆ ಹಾಕಿದ ಮಣ್ಣಿನ ತಾತ್ಕಾಲಿಕ ಜಲ್ಲಿಗಳನ್ನು ಹಾಕಿ ರಸ್ತೆ ಉಪಯೋಗಕ್ಕೆ ಅನುಕೂಲ ಕಲ್ಪಿಸುವಂತೆ ,ಹದಗೆಟ್ಟ ರಸ್ತೆಯನ್ನು ದುರಸ್ತಿಗೊಳಿಸುವಂತೆ, ಮತ್ತು ಚರಂಡಿಯ ಹೂಳು ಹಾಗೂ ಗಿಡಗಂಟಿಗಳನ್ನು ತೆರವುಗೊಳಿಸುವಂತೆ,ಬಾಕಿ ಇರುವ ನಗರೋತ್ಥಾನದ/ ನಗರಸಭಾ ವತಿಯಿಂದ ನಡೆಸುವ ಕಾಮಗಾರಿ ಪೂರ್ಣಗೊಳಿಸುವಂತೆ ಜಿಲ್ಲಾಧಿಕಾರಿ/ಯೋಜನಾ ನಿರ್ದೇಶಕರ ಗಮನಕ್ಕೆ ತಂದು ಪರಿಹರಿಸಬೇಕು ಎಂಬುದಾಗಿ ಮನವಿಯಲ್ಲಿ ತಿಳಿಸಿದ್ದಾರೆ.

LEAVE A REPLY

Please enter your comment!
Please enter your name here