ಶಾಂತಿಮೊಗರು ಸೇತುವೆ ಸಮೀಪ ಕೆಳಮಟ್ಟದಲ್ಲಿ ನೇತಾಡುತ್ತಿರುವ ವಿದ್ಯುತ್ ತಂತಿ-ತಂತಿಯನ್ನು ಎತ್ತರಕ್ಕೆ ಸ್ಥಳಾಂತರಿಸಿ ಶಾಶ್ವತ ಪರಿಹಾರ ಒದಗಿಸಲು ಆಗ್ರಹ

0

ಕಾಣಿಯೂರು: ಕುದ್ಮಾರು ಗ್ರಾಮದ ಶಾಂತಿಮೊಗರು ಎಂಬಲ್ಲಿ ವಿದ್ಯುತ್ ಲೈನ್ ನೇತಾಡುತ್ತಿದ್ದು, ಅಪಾಯದ ಸ್ಥಿತಿಯಲ್ಲಿದೆ. ಕುದ್ಮಾರು ಸಮೀಪ ಶಾಂತಿಮೊಗರು ಎಂಬಲ್ಲಿ ಸೇತುವೆ ಪಕ್ಕ ಕುಮಾರಧಾರ ನದಿಯ ಮೂಲಕ ಅಲಂಕಾರಿಗೆ ಹಾದು ಹೋಗಿರುವ ವಿದ್ಯುತ್ ತಂತಿಗಳು ಮಳೆ, ಗಾಳಿಗೆ ಜೋತು ಬಿದ್ದಿದ್ದು, ಕೈಗೆ ನಿಲುಕುವಂತೆ ಹಾದು ಹೋಗಿರುವುದರಿಂದ ಅಪಾಯಕಾರಿ ಸ್ಥಿತಿಯಲ್ಲಿದೆ. ಈ ಸೇತುವೆ ಮೂಲಕ ಅದೆಷ್ಟೋ ವಾಹನಗಳ ಸಂಚಾರ ಸೇರಿದಂತೆ ಪ್ರಕೃತಿ ಸೌಂದರ್ಯವನ್ನು ವೀಕ್ಷಿಸಲು ಜನರು ಆಗಮಿಸುತ್ತಿದ್ದಾರೆ. ಅಲ್ಲದೆ ವಿವಿಧ ಕಡೆಗಳಲ್ಲಿ ಜೋತು ಬಿದ್ದ ವಿದ್ಯುತ್ ತಂತಿಗಳ ಘರ್ಷಣೆಯಿಂದ ಅದೆಷ್ಟೋ ಅವಘಡಗಳು ಈಗಾಗಲೇ ಸಂಭವಿಸಿ ಹೋಗಿವೆ.ಈ ನಿಟ್ಟಿನಲ್ಲಿ ಸಂಬಂಧಪಟ್ಟ ಅಽಕಾರಿಗಳು ಕೂಡಲೇ ಕೆಳಮಟ್ಟದಲ್ಲಿರುವ ವಿದ್ಯುತ್ ತಂತಿಗಳನ್ನು ಬದಲಿಸಿ ಜೋತು ಬೀಳದಂತೆ ಹೊಸ ತಂತಿಗಳನ್ನು ಅಳವಡಿಸಬೇಕೆಂದು ಗ್ರಾಮಸ್ಥರು ಆಗ್ರಹಿಸಿದ್ದಾರೆ.


ದೇವರಗುಡ್ಡೆ ವೀರಾಂಜನೇಯ ಗೆಳೆಯರ ಬಳಗದಿಂದ ಗ್ರಾ. ಪಂ.ಗೆ ಮನವಿ
ಶಾಂತಿಮೊಗರು ಎಂಬಲ್ಲಿ ಸೇತುವೆ ಪಕ್ಕ ಕುಮಾರಧಾರ ನದಿಯ ಮೂಲಕ ಅಲಂಕಾರಿಗೆ ಹಾದು ಹೋಗಿರುವ ವಿದ್ಯುತ್ ಲೈನ್ ಸೇತುವೆ ಪಕ್ಕದಲ್ಲಿಯೇ ನೇತಾಡುತ್ತಿದ್ದು, ಮಳೆಗಾಲದಲ್ಲಿ ಈ ಸೇತುವೆಯ ಪಕೃತಿಯ ಸೌಂದರ್ಯವನ್ನು ನೋಡಲು ಸಾಕಷ್ಟು ಜನರು ಆಗಮಿಸುವುದರಿಂದ ಈ ನೇತಾಡುತ್ತಿರುವ ಈ ವಿದ್ಯುತ್ ತಂತಿಯು ಅಪಾಯಕಾರಿಯಾಗಿರುತ್ತದೆ. ಈ ನಿಟ್ಟಿನಲ್ಲಿ ಮುನ್ನಚೆರಿಕೆ ಕ್ರಮಕ್ಕಾಗಿ ಈ ವಿದ್ಯುತ್ ತಂತಿಯನ್ನು ಎತ್ತರಕ್ಕೆ ಸ್ಥಳಾಂತರ ಮಾಡಿ ಶಾಶ್ವತ ಪರಿಹಾರ ಕಂಡುಕೊಳ್ಳಬೇಕೆಂದು ಬೆಳಂದೂರು ದೇವರಗುಡ್ಡೆ ವೀರಾಂಜನೇಯ ಗೆಳೆಯರ ಬಳಗ ಸೇವಾ ಟ್ರಸ್ಟ್ ನಿಂದ ಬೆಳಂದೂರು ಗ್ರಾಮ ಪಂಚಾಯತ್‌ಗೆ ಮನವಿ ಮಾಡಿದ್ದಾರೆ.

LEAVE A REPLY

Please enter your comment!
Please enter your name here