ನಿಡ್ಪಳ್ಳಿ: ಅಪಾಯದಂಚಿನಲ್ಲಿ ರಸ್ತೆಗೆ ಬಾಗಿ ನಿಂತ ಮರ- ತೆರವುಗೊಳಿಸುವಂತೆ ಸಾರ್ವಜನಿಕರ ಆಗ್ರಹ

0

ನಿಡ್ಪಳ್ಳಿ: ರೆಂಜ-ಮುಡ್ಪಿನಡ್ಕ ಬಡಗನ್ನೂರು ಹೋಗುವ ರಸ್ತೆಯಲ್ಲಿ ವಿಜಯನಗರ ನಿಡ್ಪಳ್ಳಿ ಪಂಚಾಯತ್ ಸಮೀಪ ಮುಖ್ಯ ರಸ್ತೆಗೆ ಮರ ಒಂದು ಬಾಗಿ ಅಪಾಯದಂಚಿನಲ್ಲಿದ್ದು ತೆರವುಗೊಳಿಸುವಂತೆ ಸಾರ್ವಜನಿಕರು ಆಗ್ರಹಿಸುತ್ತಿದ್ದಾರೆ.

ಮರದ ಕೆಳಗೆ ವಿದ್ಯುತ್ ಲೈನ್ ಕೂಡ ಇರುವುದು ಮತ್ತಷ್ಟು ಆತಂಕಕ್ಕೆ ಕಾರಣವಾಗಿದೆ. ರಸ್ತೆಯಲ್ಲಿ ಸಂಚರಿಸುವವರು ಮರವನ್ನು ನೋಡಿ ಭಯದಿಂದಲೇ ಚಲಿಸುವಂತಾಗಿದ್ದು, ಗಾಳಿ ಮಳೆಗೆ ಯಾವಾಘ ಬೇಕಾದರೂ ಅಪಾಯ ಸಂಭವಿಸಬಹುದು. ಆದುದರಿಂದ ತಕ್ಷಣ ಮರವನ್ನು ತೆರವುಗೊಳಿಸಿ ಬರುವ ಅಪಾಯವನ್ನು ತಪ್ಪಿಸ ಬೇಕೆಂದು ಸಾರ್ವಜನಿಕರು ಸಂಬಂಧ ಪಟ್ಟವರನ್ನು ಒತ್ತಾಯಿಸುತ್ತಿದ್ದಾರೆ.

LEAVE A REPLY

Please enter your comment!
Please enter your name here