ತಾಳೆಹಿತ್ಲು: ಧರೆ ಕುಸಿತ- ಮನೆ, ತೋಟ ಅಪಾಯದಲ್ಲಿ

0

ಉಪ್ಪಿನಂಗಡಿ: ನಿರಂತರ ಮಳೆಯಿಂದಾಗಿ 34 ನೆಕ್ಕಿಲಾಡಿ ಗ್ರಾಮದ ತಾಳೆಹಿತ್ಲು ಎಂಬಲ್ಲಿ ಧರೆ ಕುಸಿಯುತ್ತಿದ್ದು, ಜನಾರ್ದನ ನಾಯ್ಕ ಮತ್ತು ದಿ. ಲಿಂಗಪ್ಪ ನಾಯ್ಕ ಎಂಬವರ ಮನೆ ಹಾಗೂ ಅಡಿಕೆ ತೋಟ ಅಪಾಯಕ್ಕೆ ಸಿಲುಕುವ ಸಾಧ್ಯತೆ ಇದೆಯಲ್ಲದೆ, ಖಾಸಗಿ ವ್ಯಕ್ತಿಯೋರ್ವರ ಮನೆಗೆ ಹೋಗುವ ದಾರಿಯ ಮೇಲೆಯೂ ಮಣ್ಣು ಬಿದ್ದಿದೆ.


ಈಗಾಗಲೇ ಸುಮಾರು 100 ಮೀಟರನಷ್ಟು ಉದ್ದಕ್ಕೆ ಧರೆ ಕುಸಿದಿದ್ದು, ಈ ಧರೆಯ ಮೇಲ್ಭಾಗದಲ್ಲಿ ಅಡಿಕೆ ತೋಟ, ಮನೆಗಳಿವೆ. ಧರೆ ಕುಸಿಯುತ್ತಲೇ ಇದ್ದು, ಇನ್ನಷ್ಟು ಧರೆ ಕುಸಿದರೆ ಇವರ ಅಡಿಕೆ ತೋಟ ಹಾಗೂ ಮನೆಗಳು ಅಪಾಯಕ್ಕೆ ಸಿಲುಕಲಿವೆ. ಆದ್ದರಿಂದ ಸಂಬಂಧಿತ ಇಲಾಖೆಗಳು ಈ ಬಗ್ಗೆ ಸೂಕ್ತ ಕ್ರಮ ಕೈಗೊಳ್ಳಬೇಕೆಂದು ಅವರು ಆಗ್ರಹಿಸಿದ್ದಾರೆ.

LEAVE A REPLY

Please enter your comment!
Please enter your name here