ಉಪ್ಪಿನಂಗಡಿ: ಎಸ್‌ಡಿಪಿಐಯಿಂದ ಸ್ವಾತಂತ್ರ್ಯ ದಿನಾಚರಣೆ

0

ಉಪ್ಪಿನಂಗಡಿ: ಸೋಶಿಯಲ್ ಡೆಮಾಕ್ರಟಿಕ್ ಪಕ್ಷದ ಉಪ್ಪಿನಂಗಡಿ ಬ್ಲಾಕ್ ಸಮಿತಿಯ ವತಿಯಿಂದ ನೆಕ್ಕಿಲಾಡಿ ಜಂಕ್ಷನ್‌ನಲ್ಲಿ ನಡೆದ ಸ್ವಾತಂತ್ರ್ಯ ದಿನಾಚರಣೆಯಲ್ಲಿ ಉದ್ಯಮಿ ಇಸ್ಮಾಯೀಲ್ ಮೇದರಬೆಟ್ಟು ಧ್ವಜಾರೋಹಣ ನೆರವೇರಿಸಿ, ಸ್ವಾತಂತ್ರ್ಯೋತ್ಸವದ ಸಂದೇಶ ನೀಡಿದರು.


ಈ ಸಂದರ್ಭ ವಕೀಲ ಅಬ್ದುಲ್ ರಹಿಮಾನ್ ಬಂಡಾಡಿ, ಎಸ್‌ಡಿಪಿಐ ಉಪ್ಪಿನಂಗಡಿ ಬ್ಲಾಕ್ ಅಧ್ಯಕ್ಷ ಮುಸ್ತಫಾ ಲತೀಫಿ, ಕಾಂಗ್ರೆಸ್ ಬೂತ್ ಅಧ್ಯಕ್ಷ ಖಾದರ್ ಆದರ್ಶನಗರ, ಉಪ್ಪಿನಂಗಡಿ ಗ್ರಾ.ಪಂ. ಸದಸ್ಯರಾದ ಮೈಸೀದಿ ಇಬ್ರಾಹೀಂ, ಅಬ್ದುರ್ರಶೀದ್ ಮಠ, ಸ್ಥಳೀಯರಾದ ಉಮರಾಕ, ಶರೀಕ್ ಅರಫಾ, ಅಬ್ದುರ್ರಹ್ಮಾನ್ ಮೇದರಬೆಟ್ಟು, ಅಝೀಝ್ ಆದರ್ಶನಗರ, ಶರೀಫ್ ಬೊಳಂತಿಲ, ಹಮೀದ್ ಪರನೀರು, ಯೂಸುಫ್ ಬೇರಿಕೆ, ಎಸ್‌ಡಿಪಿಐ ಕ್ಯಾಡರ್‌ಗಳು ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು. ಝಕಾರಿಯಾ ಕೊಡಿಪ್ಪಾಡಿ ಕಾರ್ಯಕ್ರಮ ನಿರೂಪಿಸಿದರು.

LEAVE A REPLY

Please enter your comment!
Please enter your name here