ಪುತ್ತೂರು: ತೆಂಕಿಲ ದಿ.ಕೆ.ಆನಂದ ಗೌಡ-ಕೆ.ವಿಮಲ ಅವರ ಪುತ್ರ ಅನಿಲ್ ತೆಂಕಿಲ ಅವರು ನಗರ ಮಂಡಲದ ಪ್ರಧಾನ ಕಾರ್ಯದರ್ಶಿಯಾಗಿ ಆಯ್ಕೆಯಾಗಿದ್ದಾರೆ.ವಿವಿಧ ಸಂಘಟನೆಯಲ್ಲಿ ಗುರುತಿಸಿಕೊಂಡಿರುವ ಇವರು ವಿಶ್ವಹಿಂದು ಪರಿಷತ್ನ ಪ್ರಖಂಡ ಅಧ್ಯಕ್ಷರಾಗಿ ಆರು ವರ್ಷ ಸೇವೆ ಸಲ್ಲಿಸಿದ್ದಾರೆ.ಬಿಜೆಪಿ ಪಕ್ಷದಲ್ಲಿ ಬೂತ್ ಮತ್ತು ವಾರ್ಡ್ ಅಧ್ಯಕ್ಷರಾಗಿ ಸುಮಾರು 20 ವರ್ಷ ಸೇವೆ ಸಲ್ಲಿಸಿದ್ದ ಇವರು ತೆಂಕಿಲ ಶ್ರೀ ಮಹಾಲಿಂಗೇಶ್ವರ ದೇವರ ಉತ್ಸವ ಸಮಿತಿ ಉಪಾಧ್ಯಕ್ಷರಾಗಿ ಸೇವೆ ಸಲ್ಲಿಸಿದ್ದಾರೆ.ಇವರು ಲೋಕಸಭಾ ಚುನಾವಣೆ ಸಂದರ್ಭ ಚುನಾವಣಾ ಕಚೇರಿಯ ಉಸ್ತುವಾರಿಯಾಗಿಯೂ ಜವಾಬ್ದಾರಿ ನಿರ್ವಹಿಸಿದ್ದರು.ಈ ಹಿಂದೆ ಇವರು ಪುತ್ತಿಲ ಪರಿವಾರದ ನಗರ ಘಟಕದ ಅಧ್ಯಕ್ಷರಾಗಿದ್ದರು.ಇವರು ಪತ್ನಿ ಕವಿತಾ ಕೆ, ಪುತ್ರ ಅನುದೀಪ್ ಕೆ.ಜೆ, ಪುತ್ರಿ ಅನಘ ಕೆ.ಎ.ಅವರೊಂದಿಗೆ ಸುಖೀ ಸಂಸಾರ ನಡೆಸುತ್ತಿದ್ದಾರೆ.