ಕಬಕ ಸ.ಪ.ಪೂ.ಕಾಲೇಜು ಪ್ರಾಂಶುಪಾಲರಾಗಿ ಸುಧೀರ್ ಕುಮಾರ್ ಎಂ.

0

ಪುತ್ತೂರು: ಕಬಕ ಸರಕಾರಿ ಪದವಿ ಪೂರ್ವ ಕಾಲೇಜಿನ ನೂತನ ಪ್ರಾಂಶುಪಾಲರಾಗಿ ಉಪ್ಪಿನಂಗಡಿ ಪದವಿ ಪೂರ್ವ ಕಾಲೇಜಿನಿಂದ ವರ್ಗಾವಣೆಗೊಂಡಿರುವ ಸುಧೀರ್ ಕುಮಾರ್ ಎಂ.ಅವರು ಅಧಿಕಾರ ವಹಿಸಿಕೊಂಡಿದ್ದಾರೆ.
ಕಬಕ ಪದವಿ ಪೂರ್ವ ಕಾಲೇಜು ಪ್ರಾಂಶುಪಾಲರಾಗಿದ್ದ ಪ್ರೇಮಲತಾ ಜೆ.ರೈ ಅವರು ವಯೋ ನಿವೃತ್ತಿ ಹೊಂದಿದ ಬಳಿಕ ಕನ್ನಡ ಉಪನ್ಯಾಸಕ ಶ್ರೀಧರ್ ರೈಯವರು ಪ್ರಭಾರ ಪ್ರಾಂಶುಪಾಲರಾಗಿ ಕರ್ತವ್ಯ ನಿರ್ವಹಿಸುತ್ತಿದ್ದರು.ಇದೀಗ ಉಪ್ಪಿನಂಗಡಿ ಸರಕಾರಿ ಪದವಿ ಪೂರ್ವ ಕಾಲೇಜಿನಿಂದ ವರ್ಗಾವಣೆಗೊಂಡು ಆಗಮಿಸಿರುವ ಸುಧೀರ್ ಕುಮಾರ್ ಎಂ.ಅವರು ವರ್ಗಾವಣೆಗೊಂಡು ಆಗಮಿಸಿ ನೂತನ ಪ್ರಾಂಶುಪಾಲರಾಗಿ ಅಧಿಕಾರ ವಹಿಸಿಕೊಂಡಿದ್ದಾರೆ.

LEAVE A REPLY

Please enter your comment!
Please enter your name here