ಪುಣಚ ಪ್ರಾ.ವ್ಯ.ಸೇ.ಸ.ಸಂಘದ ಮಾಜಿ ಅಧ್ಯಕ್ಷ ಬಳಂತಿಮೊಗರು ರಾಮಕೃಷ್ಣ ಭಟ್ ನಿಧನ

0

ಪುಣಚ: ಪುಣಚ ಗ್ರಾಮದ ಬಳಂತಿಮೊಗರು ರಾಮಕೃಷ್ಣ ಭಟ್ (82ವ.)ರವರು ಆ.19ರಂದು ಮಾಣಿಲ ಸಮೀಪದ ಪಕಳಕುಂಜದ ಸ್ವಗೃಹದಲ್ಲಿ ಹೃದಯಾಘಾತದಿಂದ ನಿಧನರಾದರು.


ಇವರು ಹಿರಿಯ ಕಾಂಗ್ರೆಸ್ ಮುಖಂಡರಾಗಿದ್ದು ಪುಣಚ ಗ್ರಾ.ಪಂ.ಮಾಜಿ ಅಧ್ಯಕ್ಷರಾಗಿ, ಪುಣಚ ಪ್ರಾ.ವ್ಯ.ಸೇ.ಸ.ಸಂಘದ ಮಾಜಿ ಅಧ್ಯಕ್ಷರಾಗಿ, ಬಂಟ್ವಾಳ ತಾಲೂಕು ಮಾರ್ಕೆಟಿಂಗ್ ಸೊಸೈಟಿಯ ಮಾಜಿ ಅಧ್ಯಕ್ಷರಾಗಿ ಸೇವೆ ಸಲ್ಲಿಸಿ ಚಿರಪರಿಚಿತರಾಗಿದ್ದರು. ಪ್ರಸ್ತುತ ಮಾಣಿಲ ಸಮೀಪದ ಪಕಳಕುಂಜದಲ್ಲಿ ವಾಸ್ತವ್ಯ ಹೊಂದಿದ್ದಾರೆ.


ಮೃತರು ಪತ್ನಿ ಸರಸ್ವತಿ ಭಟ್, ಪುತ್ರರಾದ ಹನುಮಗಿರಿ ಯಕ್ಷಗಾನ ಮೇಳದ ಪ್ರಬಂಧಕ ಹರೀಶ್ ಭಟ್, ರವಿ ಭಟ್, ಸೊಸೆಯಂದಿರು ಹಾಗೂ ಮೊಮ್ಮಕ್ಕಳನ್ನು ಅಗಲಿದ್ದಾರೆ.

LEAVE A REPLY

Please enter your comment!
Please enter your name here