ಕ್ಷಾತ್ರೀಯ ಸೌಹಾರ್ದ ಸಹಕಾರಿ ಸಂಘದ ಅಧ್ಯಕ್ಷರಾಗಿ ಉಮೇಶ್, ಉಪಾಧ್ಯಕ್ಷರಾಗಿ ಬಾಲಚಂದ್ರ

0

ಪುತ್ತೂರು:ಬಪ್ಪಳಿಗೆ ರಾಧಾಕೃಷ್ಣ ಮಂದಿರದ ಬಳಿಯಿರುವ ಸೈನಕ ಭವನ ಕಟ್ಟಡದಲ್ಲಿ ಕಾರ್ಯನಿರ್ವಹಿಸುತ್ತಿರುವ ಕ್ಷಾತ್ರೀಯ ಸೌಹಾರ್ದ ಸಹಕಾರಿ ಸಂಘದ ನೂತನ ಆಡಳಿತ ಮಂಡಳಿಯ ಅಧ್ಯಕ್ಷರಾಗಿ ಉಮೇಶ್ ಕೆ. ಹಾಗೂ ಉಪಾಧ್ಯಕ್ಷರಾಗಿ ನಗರ ಸಭಾ ಸದಸ್ಯ ಬಾಲಚಂದ್ರ ಕೆಮ್ಮಿಂಜೆ ಅವಿರೋಧವಾಗಿ ಆಯ್ಕೆಯಾಗಿದ್ದಾರೆ.


ಸಂಘದಲ್ಲಿ ಆ.21ರಂದು ನಡೆದ ಆಯ್ಕೆ ಪ್ರಕ್ರಿಯೆಯಲ್ಲಿ ಅಧ್ಯಕ್ಷ ಸ್ಥಾನಕ್ಕೆ ನಾಮಪತ್ರ ಸಲ್ಲಿಸಿದ್ದ ಉಮೇಶ್ ಕೆಯವರನ್ನು ಸುಬ್ರಹ್ಮಣ್ಯ ಕೆಮ್ಮಿಂಜೆ ಸೂಚಿಸಿ, ವಿದ್ಯಾಲಕ್ಷ್ಮೀ ಅನುಮೋದಿಸಿದ್ದರು. ಉಪಾಧ್ಯಕ್ಷ ಸ್ಥಾನಕ್ಕೆ ನಾಮಪತ್ರ ಸಲ್ಲಿಸಿದ್ದ ಬಾಲಚಂದ್ರ ಕೆಮ್ಮಿಂಜೆಯವರನ್ನು ಉಮೇಶ್ ಕೆ ಸೂಚಿಸಿ, ಜಿತೇಂದ್ರ ಅನುಮೋದಿಸಿದರು. ನಿರ್ದೇಶಕರಾದ ಅರುಣ್ ಕುಮಾರ್ ಕೆ, ನವೀನ್‌ಚಂದ್ರ, ಮಾಧವ, ಯಶವಂತ ಬಿ.ಎಂ., ವಾಣಿ ಸುರೇಶ್ ಕುಮಾರ್ ಉಪಸ್ಥಿತರಿದ್ದರು. ಮಂಗಳೂರು ಸಹಕಾರಿ ಇಲಾಖೆಯ ನವೀನ್ ಕುಮಾರ್ ಎಂ.ಎಸ್ ರಿಟರ್ನಿಂಗ್ ಅಧಿಕಾರಿಯಾಗಿದ್ದರು. ಸಂಘದ ಮುಖ್ಯ ಕಾರ್ಯನಿರ್ವಹಣಾಧಿಕಾರಿ ರವೀಶ ಕೆ.ಎಸ್ ಹಗೂ ಸಿಬಂದಿ ಜ್ಞಾನೇಶ್ವರಿ ಕೆ. ಸಹಕರಿಸಿದರು.

LEAVE A REPLY

Please enter your comment!
Please enter your name here