ಸೆ.6: ಎಲ್‌ಐಸಿ ಸೇವಾ ಕೇಂದ್ರ ಬಿಮ ಕನೆಕ್ಟ್ ಸ್ಥಳಾಂತರಗೊಂಡು ಶುಭಾರಂಭ

0

ಪುತ್ತೂರು: ಭಾರತೀಯ ಜೀವ ವಿಮಾ ನಿಗಮದ ನಿವೃತ್ತ ಅಭಿವೃದ್ಧಿ ಅಧಿಕಾರಿ ಟಿ.ಸದಾನಂದ ಶೆಟ್ಟಿ ಮಾಲಕತ್ವದ ಪ್ರೀಮಿಯಮ್ ಪಾಯಿಂಟ್ ಎಲ್‌ಐಸಿ ಅಸೋಸಿಯೇಟ್ ಬಿಮ ಕನೆಕ್ಟ್ ಆಫೀಸ್ ಎಲ್‌ಐಸಿ ಸೇವಾಕೇಂದ್ರ ಸಿಪಿಸಿ ಪ್ಲಾಝಾದಲ್ಲಿ ಕಾರ್ಯನಿರ್ವಹಿಸುತ್ತಿದ್ದು, ಸೆ.6ರಂದು ಎಮ್.ಟಿ. ರಸ್ತೆಯಲ್ಲಿರುವ ಕಾಮಧೇನು ಕಟ್ಟಡಕ್ಕೆ ಸ್ಥಳಾಂತರಗೊಂಡು ಶುಭಾರಂಭಗೊಳ್ಳಲಿದೆ. ಉಪ್ಪಿನಂಗಡಿ ಭಟ್ ನರ್ಸಿಂಗ್ ಹೋಮ್‌ನ ಹಿರಿಯ ವೈದ್ಯ ಡಾ.ಕೆ.ಜಿ.ಭಟ್ ದೀಪ ಬೆಳಗಿಸಿ ಉದ್ಘಾಟಿಸಲಿದ್ದಾರೆ. ಮುಖ್ಯ ಅತಿಥಿಗಳಾಗಿ ಪುತ್ತೂರು ಎಲ್‌ಐಸಿ ಚೀಫ್ ಮ್ಯಾನೇಜರ್ ಎಚ್.ಉಜ್ವಲ್, ಅಸಿಸ್ಟೆಂಟ್ ಮ್ಯಾನೇಜರ್ ಎಂ.ಯು.ಗುರುರಾಜ್ ಭಾಗವಹಿಸಲಿದ್ದಾರೆ. ಜೀವ ವಿಮಾಗೆ ಸಂಬಂಧಿಸಿದ ಎಲ್ಲಾ ಸೇವಾ ಸೌಲಭ್ಯಗಳು ನಮ್ಮಲ್ಲಿ ಉಚಿತವಾಗಿ ಲಭ್ಯವಿದೆ ಎಂದು ಮಾಲಕರು ತಿಳಿಸಿದ್ದಾರೆ.

LEAVE A REPLY

Please enter your comment!
Please enter your name here