ಸದಸ್ಯರ ಆರೋಗ್ಯದತ್ತ ಕ್ಯಾಂಪ್ಕೋ ಚಿತ್ತ – ಆರ್ಥಿಕ ನೆರವಿನ ಚೆಕ್‌ ಹಸ್ತಾಂತರ

0

ಪುತ್ತೂರು: ಜಿಲ್ಲೆಯ ಪ್ರತಿಷ್ಠಿತ ಸಹಕಾರಿ ಸಂಸ್ಥೆ ಕ್ಯಾಂಪ್ಕೋ, ಮಂಗಳೂರು ಇದರ ವತಿಯಿಂದ ಸಾಂತ್ವನ (“ಸದಸ್ಯರ ಆರೋಗ್ಯದತ್ತ ಕ್ಯಾಂಪ್ಕೋ ಚಿತ್ತ”) ಎಂಬ ಯೋಜನೆಯಡಿಯಲ್ಲಿ ಆರ್ಥಿಕ ನೆರವಿನ ಹಸ್ತಾಂತರ ಕಾರ್ಯಕ್ರಮವು ಅ.10ರಂದು ಉಪ್ಪಿನಂಗಡಿ ಕ್ಯಾಂಪ್ಕೋ ಶಾಖೆಯಲ್ಲಿ ನೆಡೆಯಿತು.

ಕ್ಯಾಂಪ್ಕೋ ಸಂಸ್ಥೆಯ ಸಕ್ರೀಯ ಸದಸ್ಯರಾದ ಶಶಿಕುಮಾರ್ ಪಿಳ್ಳೈ ಇವರ ತೆರೆದ ಹೃದಯ ಶಸ್ತ್ರಕ್ರಿಯೆ ಚಿಕಿತ್ಸೆಗಾಗಿ ಅವರ ಪತ್ನಿ ಆಶಾರವರಿಗೆ ಕ್ಯಾಂಪ್ಕೋ ವತಿಯಿಂದ ನೀಡಲಾದ ರೂ. 2 ಲಕ್ಷ ರೂಪಾಯಿಯ ಚೆಕ್ ಅನ್ನು ಸಂಸ್ಥೆಯ ಮಾನ್ಯ ಉಪಾಧ್ಯಕ್ಷರಾದ ಶಂಕರನಾರಾಯಣ ಭಟ್ ಖಂಡಿಗೆ ಅವರು ಫಲಾನುಭವಿಗೆ ಹಸ್ತಾಂತರಿಸಿದರು.

ಈ ಸಂದರ್ಭದಲ್ಲಿ ಕ್ಯಾಂಪ್ಕೋ ಸಂಸ್ಥೆಯ ನಿರ್ದೇಶಕರಾದ ರಾಘವೇಂದ್ರ ಭಟ್ ಕೆದಿಲ, ಸೀನಿಯರ್ ಮೆನೇಜರ್ ಪ್ರಕಾಶ್ ಕುಮಾರ್ ಶೆಟ್ಟಿ, ಪುತ್ತೂರು ರೀಜನ್, ಉಪ್ಪಿನಂಗಡಿ ಶಾಖಾಧಿಕಾರಿ ಸುರೇಶ್ ಯಸ್ ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here