ಕೂರ್ನಡ್ಕ: ರಸ್ತೆ ಬದಿ ವಾಂತಿ ಮಾಡುತ್ತಿದ್ದ ಬಾಲಕನಿಗೆ ಹಲ್ಲೆ ನಡೆಸಿದ ಅಪರಿಚಿತ ತಂಡ – ದೂರು

0

ಪುತ್ತೂರು: ಕೂರ್ನಡ್ಕದಲ್ಲಿ ರಸ್ತೆ ಬದಿ ವಾಂತಿ ಮಾಡುತ್ತಿದ್ದ ಬಾಲಕನಿಗೆ ಅಪರಿಚಿತ ತಂಡವೊಂದು ಹಲ್ಲೆ ನಡೆಸಿದ ಘಟನೆ ಅ.16 ರ ತಡ ರಾತ್ರಿ ನಡೆದಿದೆ.


ಕಲ್ಲಡ್ಕದ ಲೈಟ್ಸ್ ಸೌಂಡ್ಸ್ ಗೆ ಸಂಬಂಧಿಸಿದ ಬಾಲಕ ಹಲ್ಲೆಗೊಳಗಾದವರು. ಕಾರ್ಯಕ್ರಮಕ್ಕೆ ಸಂಬಂಧಿಸಿ ಲೈಟಿಂಗ್ ಮಾಡಿ ಟೆಂಪೊ ಮತ್ತು ಕಾರಿನಲ್ಲಿ ಹಿಂದಿರುಗುತ್ತಿದ್ದ ವೇಳೆ ಕಾರಿನಲ್ಲಿದ್ದ ಬಾಲಕನೋರ್ವ ಅಸ್ವಸ್ಥಗೊಂಡು ವಾಂತಿ ಬರುತ್ತದೆ ಎಂದಾಗ ಕೂರ್ನಡ್ಕದ ಬಳಿ ಕಾರು ನಿಲ್ಲಿಸಲಾಗಿತ್ತು. ಬಾಲಕ ರಸ್ತೆ ಬದಿ ವಾಂತಿ ಮಾಡುತ್ತಿದ್ದ ವೇಳೆ ಕಾರಿನಲ್ಲಿದ್ದವರು ಆತನಿಗೆ ಬಾಟಲಿಯಲ್ಲಿ ನೀರು ಕೊಡುತ್ತಿದ್ದಾಗ ಅಪರಿಚಿತರು ಬಂದು ಹಲ್ಲೆ ನಡೆಸಿದ್ದಾರೆ.

ಘಟನೆ ಕುರಿತು ಪುತ್ತೂರು ನಗರ ಪೊಲೀಸ್ ಠಾಣೆಗೆ ದೂರು ನೀಡಲಾಗಿದೆ. ಪೊಲೀಸರು ಸಿ ಸಿ ಕ್ಯಾಮರ ಆದರಿಸಿ ಹಲ್ಲೆ ನಡೆಸಿದವರ ಪತ್ತೆಗಾಗಿ ತನಿಖೆ ನಡೆಸುತ್ತಿದ್ದಾರೆ. ಘಟನೆಗೆ ಸಂಬಂಧಿಸಿ ಬಿಜೆಪಿ ಮುಖಂಡ ಅರುಣ್ ಕುಮಾರ್ ಪುತ್ತಿಲ ಅವರು ರಾತ್ರಿ ಹಲ್ಲೆಗೊಳಗಾದವರಿಗೆ ನ್ಯಾಯ ಕೊಡಿಸುವಂತೆ ಪೊಲೀಸ್ ಠಾಣೆಗೆ ತೆರಳಿ ಆಗ್ರಹಿಸಿದ್ದರು.

LEAVE A REPLY

Please enter your comment!
Please enter your name here