ಅರಿಯಡ್ಕ:ಶ್ರೀ ಅಯ್ಯಪ್ಪ ಭಕ್ತ ಸಮಿತಿ ದರ್ಬೆತ್ತಡ್ಕ ಇದರ ಮಹಾಸಭೆ ಅ.13ರಂದು ಅಯ್ಯಪ್ಪ ಭಜನಾ ಮಂದಿರದ ಶ್ರೀ ಮಣಿಕಂಠ ಸಭಾ ಭವನದಲ್ಲಿ ಶ್ರೀ ವಾಸು ಮಣಿಯಾಣಿ ಯವರ ಅಧ್ಯಕ್ಷತೆಯಲ್ಲಿ ನಡೆಯಿತು.
ಈ ಸಭೆಯಲ್ಲಿ ಆಡಳಿತ ಸಮಿತಿಗೆ ನೂತನ ಪದಾಧಿಕಾರಿಗಳನ್ನು ಆಯ್ಕೆ ಮಾಡಲಾಯಿತು.ಗೌರವಾಧ್ಯಕ್ಷರಾಗಿ, ಪುರಂದರ ಶೆಟ್ಟಿ ಮುಡಾಲ,ಅಧ್ಯಕ್ಷರಾಗಿ ವಾಸು ಮಣಿಯಾಣಿ ಕುರುಂಜ, ಪ್ರ.ಕಾರ್ಯದರ್ಶಿ ರವೀಂದ್ರ ದರ್ಬೆತ್ತಡ್ಕ, ಉಪಾಧ್ಯಕ್ಷ ರಮೇಶ್ ಸುವರ್ಣ ದರ್ಬೆತ್ತಡ್ಕ, ಚನಿಯಪ್ಪ ಕೆ ದರ್ಬೆತ್ತಡ್ಕ, ಕಾರ್ಯದರ್ಶಿ ಸಂತೋಷ್ ಪಾಂಡಿಯಡ್ಕ, ಕೋಶಾಧಿಕಾರಿ ಕೇಶವ ಸುರುಳಿಕುಮೆರು, ಸಂಘಟನಾ ಕಾರ್ಯದರ್ಶಿ ಪ್ರಮೋದಿನಿ ನವೀನ್ ರೈ, ಮತ್ತು ಕಾರ್ಯಕಾರಿ ಸದಸ್ಯರುಗಳಾಗಿ ಸದಾನಂದ ಕೆ.ಎಂ, ಸುರೇಶ್ ಡಿ, ಪುಷ್ಪ ರಾಜ ಕುಡ್ಚಿಲ, ಸಾವಿತ್ರಿ ಕುರುಂಜ, ವಸಂತ ನಾಯ್ಕ ಸುರುಳಿಕುಮೇರು, ಶ್ರೀಧರ ಪೂಜಾರಿ, ಪ್ರಕಾಶ ಪರ್ಭತಡ್ಕ,ನೇಮಕ ಮಾಡಲಾಯಿತು. ಭಜನಾ ಸಮಿತಿಗೆ ಪ್ರಧಾನ ಸಂಚಾಲಕರಾಗಿ ಮೋಹನ್ ಕೆ ದರ್ಬೆತ್ತಡ್ಕ, ಸಹ ಸಂಚಾಲಕರಾಗಿ ಗುರುಪ್ರಸಾದ್ ದರ್ಬೆತ್ತಡ್ಕ, ರವಿ ದರ್ಬೆ, ರಕ್ಷಿತ್ ವಸಂತ ಸೇರ್ತಾಜೆ ಮತ್ತು ರಾಜೇಶ್ವರಿ ಇವರುಗಳನ್ನು ಆಯ್ಕೆ ಮಾಡಲಾಯಿತು. ಸಭೆಯಲ್ಲಿ ಡಿಸೆಂಬರ್ 6ರಂದು ನಡೆಯುವ ವಾರ್ಷಿಕೋತ್ಸವದ ಬಗ್ಗೆ ಚರ್ಚಿಸಲಾಯಿತು.