ಅಮಿತಾ ಸಂಜೀವ ಮಿತ್ತಳಿಕೆಯವರಿಗೆ ರಾಜ್ಯ ಮಟ್ಟದ ಅತಿಥಿ ಶಿಕ್ಷಕ ರತ್ನ ಗೌರವ

0

ಅಳಿಕೆ :- ಕಾವ್ಯಶ್ರೀ ಸೇವಾ ಟ್ರಸ್ಟ್ (ರಿ ), ಬೆಂಗಳೂರು ಇದರ ವತಿಯಿಂದ ಕೊಡಮಾಡುವ ರಾಜ್ಯ ಮಟ್ಟದ ಅತಿಥಿ ಶಿಕ್ಷಕ ರತ್ನ ಪ್ರಶಸ್ತಿ ಯನ್ನು ಬೆಂಗಳೂರಿನ ಶ್ರೀ ರವೀಂದ್ರ ಕಲಾಕ್ಷೇತ್ರದಲ್ಲಿ ಅ.18ರಂದು ನಡೆದ ಶಿಕ್ಷಕರ ದಿನಾಚರಣೆಯ ಸಂದರ್ಭದಲ್ಲಿ ಕನ್ಯಾನ ಕೆ. ಪಿ. ಎಸ್ ಶಾಲೆಯ ಅತಿಥಿ ಶಿಕ್ಷಕರಾದ ಅಮಿತಾ ಸಂಜೀವ ಮಿತ್ತಳಿಕೆಯವರಿಗೆ ಸಂಸ್ಥೆಯ ಮುಖ್ಯಸ್ಥೆ ಕಾವ್ಯಶ್ರೀ ಕೆ ಪ್ರದಾನ ಮಾಡಿದರು.

ಈ ಸಂದರ್ಭದಲ್ಲಿ ಚಲನಚಿತ್ರದ ಹಾಸ್ಯ ನಟರಾದ ಟೆನ್ನಿಸ್ ಕೃಷ್ಣ ಮುಂತಾದ ಗಣ್ಯರು ಭಾಗಿಯಾಗಿದ್ದರು. ಅಮಿತಾ ಸಂಜೀವ ಮಿತ್ತಳಿಕೆ ಶಿಕ್ಷಣ ಕ್ಷೇತ್ರ ಮಾತ್ರವಲ್ಲದೇ ಸಾಮಾಜಿಕ, ಸಾಂಸ್ಕೃತಿಕ, ಧಾರ್ಮಿಕ ಕ್ಷೇತ್ರದಲ್ಲಿಯೂ ಸಾಧನೆ ಮಾಡುತ್ತಾ ಅಳಿಕೆ ಗ್ರಾಮದ ನವಚೇತನ ಯುವತಿ ಮಂಡಲ ಚೆಂಡುಕಳದ ಅಧ್ಯಕ್ಷರಾಗಿ ಜಿಲ್ಲಾ ಮಟ್ಟದ ಸ್ಪರ್ಧೆಗಳಲ್ಲಿ ಸಮಗ್ರ ಪ್ರಶಸ್ತಿ ಗಳಿಸಿ ಸಂಸ್ಥೆಯನ್ನು ಮುನ್ನಡೆಸುತ್ತಿದ್ದಾರೆ.

LEAVE A REPLY

Please enter your comment!
Please enter your name here